ಹೊಸಕೋಟೆ: ಚಾಲಕನ ಅಜಾಗರೂಕತೆಯಿಂದ ಮಹಿಳೆ ಮೇಲೆ ಟಿಪ್ಪರ್ ಲಾರಿ ಹರಿದ ಪರಿಣಾಮ ಮಹಿಳೆ ದೇಹ ನಜ್ಜು ಗುಜ್ಜಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮೋತುಕದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಜುಳ (39) ಮೃತ ಮಹಿಳೆ, ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಮೋತುಕದಹಳ್ಳಿಯ ವಿಶ್ವವಿನಾಯಕ ಸ್ಟೋನ್ ಕ್ರಷರ್ ನಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ ಈಕೆ, ಎಂದಿನಂತೆ ನೆನ್ನೆಯೂ ಕಸಗುಡಿಸುವ ವೇಳೆ ಅದೇ ಸ್ಟೋನ್ ಕ್ರಷರ್ ಗೆ ಸಂಬಂಧಿಸಿದ ಟಿಪ್ಪರ್ ಲಾರಿಯು ಮೇಲೆ ಹರಿದ ಪರಿಣಾಮ ಮಹಿಳೆ ದೇಹ ನಜ್ಜುಗುಜ್ಜಾಗಿದೆ, ಘಟನೆಗೆ ಟಿಪ್ಪರ್ ಲಾರಿಯ ಚಾಲಕನ ಅಜಾಗರೂಕತೆಯೆ ಕಾರಣ ಎಂದು ಹೆಳಲಾಗುತ್ತಿದ್ದು, ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ : ಬಿಯರ್ ಬೆಲೆ ಮತ್ತೆ ಏರಿಕೆ
ಘಟನೆ ಸಂಬಂಧ ಸ್ಟೋನ್ ಕ್ರಷರ್ ಮಾಲೀಕ ಚಿಕ್ಕರೇವಣ್ಣ, ಮ್ಯಾನೇಜರ್ ವೇಣು ಮತ್ತು ಚಾಲಕವ ವಿರುದ್ದ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.


