Wednesday, August 27, 2025
Google search engine
HomeUncategorizedಇಂದು ಮಹಾತ್ಮ ಗಾಂಧೀಜಿ 76ನೇ ಪುಣ್ಯಸ್ಮರಣೆ

ಇಂದು ಮಹಾತ್ಮ ಗಾಂಧೀಜಿ 76ನೇ ಪುಣ್ಯಸ್ಮರಣೆ

ನವದೆಹಲಿ: ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಪಥದಲ್ಲಿ ಹೋರಾಡಿದ ಮಹಾತ್ಮ ಗಾಂಧೀಜಿಯವರ 76ನೇ ಪುಣ್ಯಸ್ಮರಣೆ.

ಬಾಪು 1948 ಜನವರಿ 30ರಂದು ನಾಥುರಾಮ್​ ಗೋಡ್ಸೆ ಗುಂಡೇಟಿನಿಂದ ನಿಧನರಾಗಿದ್ದರು. ಸತ್ಯ,​ ಅಹಿಂಸೆಯಲ್ಲಿ ಅಪಾರ ನಂಬಿಕೆ ಹೊಂದಿದ್ದ ಗಾಂಧಿ ಚಿಂತನೆಗಳು ಜಗತ್ತಿನಾದ್ಯಾಂತ ಪ್ರಶಂಸೆಗೊಳಗಾಗಿವೆ. ಈ ದಿನವನ್ನು ಶಹೀದ್​ ದಿವಸ್​ (ಹುತಾತ್ಮರ ದಿನ) ಮತ್ತು ಅಹಿಂಸೆ ಮತ್ತು ಶಾಂತಿಯ ದಿನವನ್ನಾಗಿಯೂ ಆಚರಿಸಲಾಗುತ್ತದೆ.

ಸರಳತೆ, ಶಾಂತಿ, ಸತ್ಯ, ಅಹಿಂಸೆ ಹಾಗೂ ರಾಮ ರಾಜ್ಯದ ಪ್ರತಿಪಾದಕರು ಗಾಂಧಿ. ಈಗಿನ ಕಾಲಮಾನದಲ್ಲಿ ಗಾಂಧಿ ತತ್ವಗಳನ್ನು ಯುವಕರು ಯಾವ ರೀತಿ ಪಾಲಿಸುತ್ತಿದ್ದಾರೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಗಾಂಧಿ ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಮಾತ್ರವಲ್ಲದೆ ಸ್ವತಂತ್ರ ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ವಿಚಾರಗಳ ಬಗೆಗೂ ತಮ್ಮದೇ ಆದ ದೂರದೃಷ್ಟಿ ಹೊಂದಿದ್ದರು.

ರಾಜ್​ಘಾಟ್​ನಲ್ಲಿ ನಮನ: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಸಚಿವ ಮತ್ತು ಸೇನೆ, ವಾಯುಪಡೆ ಮತ್ತು ನೌಕಾಪಡೆ ಮುಖ್ಯಸ್ಥರು ದೆಹಲಿಯ ರಾಜ್ ಘಾಟ್‌ನಲ್ಲಿರುವ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಇದಾದ ಬಳಿಕ ದೇಶಾದ್ಯಂತ ಎರಡು ನಿಮಿಷಗಳ ಮೌನಾಚರಣೆ ನಡೆಯುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments