Site icon PowerTV

ಹನುಮ ಧ್ವಜ ಪ್ರಕರಣ : ಕೆರಗೋಡು ಪಿಡಿಒ ಜೀವನ್ ಅಮಾನತು

ಬೆಂಗಳೂರು : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಪಿಡಿಒಗೆ ಅಮಾನತು ಶಿಕ್ಷೆ ನೀಡಿದೆ.

ಸರ್ಕಾರದ ಅನುಮತಿ ಪಡೆಯದೇ ಧರ್ಮ ಧ್ವಜ ಹಾರಿಸಲು ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ನೀಡಿದ್ದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಶೇಕ್ ತನ್ವೀರ್​ ಆಸಿಫ್​ ಅವರು ಕೆರೆಗೋಡು ಗ್ರಾಮ ಪಂಚಾಯಿತಿ ಪಿಡಿಒ ಜೀವನ್​ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಪಿಡಿಒ ಅಮಾನತು ಮಾಡಿರುವುದಕ್ಕೆ ಸಿಇಒ ಐದು ಕಾರಣಗಳನ್ನು ನೀಡಿದ್ದಾರೆ. ರಾಷ್ಟ್ರಧ್ವಜದ ಬದಲು ಹನುಮ ಧ್ವಜ ಹಾರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೆ, ವಿಪಕ್ಷಗಳು ಸರ್ಕಾರ ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸುತ್ತಿವೆ.

ಪಿಡಿಒ ಅಮಾನತಿಗೆ 5 ಕಾರಣ

Exit mobile version