Monday, August 25, 2025
Google search engine
HomeUncategorizedರಾಮಮಂದಿರ ಉದ್ಘಾಟನೆ : ಬಸವನ ಬಾಗೇವಾಡಿಯಲ್ಲಿ 'ರಾಮತಾರಕ ಹೋಮ'

ರಾಮಮಂದಿರ ಉದ್ಘಾಟನೆ : ಬಸವನ ಬಾಗೇವಾಡಿಯಲ್ಲಿ ‘ರಾಮತಾರಕ ಹೋಮ’

ವಿಜಯಪುರ : ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ರಾಮ ಭಕ್ತರಲ್ಲಿ ಸಂತಸ ಮನೆ ಮಾಡಿದೆ. ಈ ನಡುವೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ‘ರಾಮತಾರಕ ಹೋಮ’ ನಡೆಸಲಾಯಿತು.

ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸಂಘಟನೆಗಳ ನೇತೃತ್ವದಲ್ಲಿ ರಾಮತಾರಕ ಹೋಮ‌ ನಡೆಸಲಾಯಿತು. ರಾಮ‌ ಮಂದಿರ ಉದ್ಘಾಟನೆ ಸೂಸುತ್ರವಾಗಿ ಜರುಗಲಿ, ರಾಮನ ಕೃಪೆಯಿಂದ ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಹೋಮ ನಡೆಸಲಾಯಿತು.

ಇನ್ನು ಪಟ್ಟಣದಲ್ಲಿ ಮಹಿಳೆಯರಿಂದ ಪೂರ್ಣಕುಂಭ ಉತ್ಸವವು ನಡೆಯಿತು. ರಾಮನ ಭಾವಚಿತ್ರ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ಈ ವೇಳೆ ವಿವಿಧ ಮಠಾಧೀಶರು, ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ‌ ಭಾಗಿಯಾಗಿದ್ದರು.

.22 ರವರೆಗೆ ಉಚಿತ ಹೆರಿಗೆ

ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭರ್ಜರಿ ಆಫ್ ಘೋಷಣೆ ಮಾಡಿದ್ದಾರೆ. ಜನವರಿ 22 ರವರೆಗೆ ವಿಜಯಪುರದ ಜೆ.ಎಸ್​.ಎಸ್ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಸಂಪೂರ್ಣ ಉಚಿತ ಹೆರಿಗೆ ಸೌಲಭ್ಯ ಕಲ್ಪಿಸಿರುವುದಾಗಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments