Sunday, August 24, 2025
Google search engine
HomeUncategorizedಸರ್ಕಾರದಲ್ಲಿ ದುಡ್ಡಿಲ್ಲ, ಗ್ಯಾರಂಟಿಯಿಂದ ಅಭಿವೃದ್ಧಿ ಕುಂಟಿತ : ಶಾಸಕ ದರ್ಶನ್ ಪುಟ್ಟಣಯ್ಯ

ಸರ್ಕಾರದಲ್ಲಿ ದುಡ್ಡಿಲ್ಲ, ಗ್ಯಾರಂಟಿಯಿಂದ ಅಭಿವೃದ್ಧಿ ಕುಂಟಿತ : ಶಾಸಕ ದರ್ಶನ್ ಪುಟ್ಟಣಯ್ಯ

ಮಂಡ್ಯ : ‘ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ, ಅಷ್ಟೊಂದು ಗ್ರ್ಯಾಂಟ್ ಬರ್ತಿಲ್ಲ. ಉಚಿತ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗಿದೆ’ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬಳಿ ಎಲ್ಲ ತರ ನಾವು ಕೇಳಿಕೊಳ್ತಿದ್ದೇವೆ‌. ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.

ಸರ್ಕಾರದಲ್ಲಿ ದುಡ್ಡಿಲ್ಲ, ಅಷ್ಟೋಂದು ಗ್ರ್ಯಾಂಟ್ ಬಂದಿಲ್ಲ. ಹಳೆ ಗ್ರ್ಯಾಂಟ್​ಗಳನ್ನ ವಾಪಸ್ ಪಡೆದಿದ್ದರು. ಅದನ್ನೆ ವಾಪಸ್ ಪಡೆದುಕೊಳ್ಳಲು ಇನ್ನು ಹೋರಾಟ ಮಾಡುತ್ತಿದ್ದೇವೆ. ಸ್ವಲ್ಪ ಮಟ್ಟಿಗೆ ಕೊಟ್ಟಿದ್ದಾರೆ ಅಷ್ಟೇ.. ಯಾವ ಕ್ಷೇತ್ರದಲ್ಲೂ ಅಭಿವೃದ್ಧಿ ಆಗುತ್ತಿಲ್ಲ ಎಂದು ಸತ್ಯಾಂಶ ಬಿಚ್ಚಿಟ್ಟರು.

ರಸ್ತೆ, ಶಾಲೆ ಸರಿಯಿಲ್ಲ ಅಂತ ಅಡ್ಡ ಹಾಕ್ತಾರೆ

ಅನುದಾನ ಎಲ್ಲಾ ಗ್ಯಾರಂಟಿಗೆ ಹೋಗುತ್ತಿದೆ. ಗ್ಯಾರಂಟಿ ಬಗ್ಗೆ ಯಾರಿಗೂ ಅರಿವು ಆಗ್ತಿಲ್ಲ. ಅದು ಎಷ್ಟು ಇಂಪ್ಯಾಕ್ಟ್ ಆಗ್ತಿದೆ ಅಂತ ಜನರಿಗೆ ಗೊತ್ತಿಲ್ಲ. ಪ್ರತಿ ಊರಿನಲ್ಲಿ ರಸ್ತೆ, ಶಾಲೆ ಸರಿಯಿಲ್ಲ ಅಂತ ನಮ್ಮನ್ನು ಅಡ್ಡ ಹಾಕ್ತಾರೆ. ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ತೇವೆ ಅಂತ ಹೇಳಿದ್ದಾರೆ ಅಷ್ಟೆ, ಇನ್ನು ನಮ್ಮ ಕೈ ಸೇರಿಲ್ಲ. ಗ್ಯಾರಂಟಿ ಯೋಜನೆಯಿಂದ ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗ್ತಿದೆ. ಇದು ನಮಗೆಲ್ಲ ಅಭ್ಯಾಸ ಆಗೋಗಿದೆ ಎಂದು ಅಸಮಾಧನಗೊಂಡರು.

ದುಡ್ಡು ಬೇರೆ ತರ ಹೋಗ್ತಿದೆ ಅಷ್ಟೇ..!

ಲೋಕಲ್ ಎಕಾನಮಿಯಲ್ಲಿ ದುಡ್ಡು ಓಡಾಡ್ತಿದೆ. ಒಂದು ಕುಟುಂಬಕ್ಕೆ 5, ಮತ್ತೊಂದು ಕುಟುಂಬಕ್ಕೆ 5 ಅಂತ ದುಡ್ಡು ಚಲಾವಣೆಯಲ್ಲಿದೆ. ಅರ್ಥಿಕವಾಗಿ ಬೆಳೆಯುತ್ತಿದೆ ನಮಗೆ ಕಾಣ್ತಿಲ್ಲ. ಅರ್ಥಿಕತೆ ಬೆಳೆಸಬೇಕು, ಇಲ್ಲಿ ಅಭಿವೃದ್ಧಿ ಆಗ್ತಿಲ್ಲ. ದುಡ್ಡು ಬೇರೆ ತರ ಹೋಗ್ತಿದೆ ಅಷ್ಟೆ. ಸರ್ಕಾರ ಯಾವ ತರ ಬ್ಯಾಲೆನ್ಸ್ ಮಾಡ್ತಾರೆ ನೋಡಬೇಕು ಎಂದು ಶಾಸಕ ದರ್ಶನ್ ಪುಟ್ಟಣಯ್ಯ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments