Saturday, August 23, 2025
Google search engine
HomeUncategorizedಪೆಟ್ಟಿಗೆ ಅಂಗಡಿಗಳ ಮೇಲೆ ಕರಡಿ ದಾಳಿ- ಮೊಟ್ಟೆ, ದಿನಸಿ ಧ್ವಂಸ!

ಪೆಟ್ಟಿಗೆ ಅಂಗಡಿಗಳ ಮೇಲೆ ಕರಡಿ ದಾಳಿ- ಮೊಟ್ಟೆ, ದಿನಸಿ ಧ್ವಂಸ!

ಚಾಮರಾಜನಗರ: ಕಾಡಿನಿಂದ ಹಾದಿ ತಪ್ಪಿ ಬಂದ ಕರಡಿಯೊಂದು ಆಹಾರಕ್ಕಾಗಿ ಪೆಟ್ಟಿಗೆ ಅಂಗಡಿಗಳಿಗೆ ನುಗ್ಗಿ ಲ್ಲಿದ್ದ ಮೊಟ್ಟೆ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದು ದ್ವಂಸ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮದಲ್ಲಿ ನಡೆದಿದೆ.

ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮದ ಅಣತಿದೂರದಲ್ಲಿ ಇರುವ ಕಾಡಿನಿಂದ ದಾರಿತಪ್ಪಿ ಬಂದ ಕರಡಿಯು ಇಂದು ಮುಂಜಾನೆ ಬಾರ್ ಒಂದರ ಬಳಿ ಇದ್ದ ತೇಜು, ಬಚ್ಚೇಗೌಡ ಎಂಬವರ ಅಂಗಡಿಗಳಲ್ಲಿ ದಾಂಧಲೆ ನಡೆಸಿದೆ.

ಇದನ್ನೂ ಓದಿ: ಸೋನಿಯಾ ಗಾಂಧಿ ಜನ್ಮದಿನಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ!

ಕರಡಿ ಅಂಗಡಿ ಪ್ರವೇಶ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರಡಿ ಹಠತ್ತಾಗಿ ಆಗಮಿಸಿ ಅಂಗಡಿಯೊಳಗೆ ನುಗ್ಗಿ ದ್ವಂಸ ಮಾಡಿರುವುದರಿಂದ ಗ್ರಾಮಸ್ಥರು ಭಯದಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments