Tuesday, September 2, 2025
HomeUncategorized28 ಸ್ಥಾನವನ್ನು ಗೆದ್ದು ಕರ್ನಾಟಕದಿಂದ ಉಡುಗೊರೆ ಕೊಡುತ್ತೇವೆ : ಯಡಿಯೂರಪ್ಪ ಶಪಥ

28 ಸ್ಥಾನವನ್ನು ಗೆದ್ದು ಕರ್ನಾಟಕದಿಂದ ಉಡುಗೊರೆ ಕೊಡುತ್ತೇವೆ : ಯಡಿಯೂರಪ್ಪ ಶಪಥ

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿಯವರಿಗೆ ಕರ್ನಾಟಕದಿಂದ ಉಡುಗೊರೆ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಶಪಥ ಮಾಡಿದರು.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಜಯಭೇರಿ ಭಾರಿಸಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್​ ಅಧಿಕಾರ ಇತ್ತು, ಇದೀಗ ಬಿಜೆಪಿ ಅಧಿಕಾರಕ್ಕೆ ಬರಲಿದೆ‌ ಎಂದರು.

ಛತ್ತಿಸ್​ಗಡದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮಧ್ಯಪ್ರದೇಶದಲ್ಲಿ ಮತ್ತೆ ನಾವು (ಬಿಜೆಪಿ) ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಇದಕ್ಕೆ ಕಾರಣ. ಇದರ ಪರಿಣಾಮ ಲೋಕಸಭೆಯಲ್ಲಿ 28 ಸ್ಥಾನವನ್ನು ಗೆದ್ದು ಕರ್ನಾಟಕದಿಂದ ಉಡುಗೊರೆ ಕೊಡಲಿದೆ ಎಂದು ವಿಶ್ವಾಸ ವ್ಯಕದತಪಡಿಸಿದರು.

ಕಾಂಗ್ರೆಸ್ ಬೂಟಾಟಿಕೆ ಕೆಲಸ ಮಾಡಲ್ಲ

ಬಿ.ವೈ. ವಿಜಯೇಂದ್ರ ಬಂದ ಬಳಿಕ ಕರ್ನಾಟಕದಲ್ಲಿ ಹೊಸ ಉತ್ಸಾಹ ಮೂಡಿದೆ. ಕಾಂಗ್ರೆಸ್ ಉತ್ಸಾಹ ಧೂಳಿಪಟವಾಗಿದೆ. ಉಚಿತ ಘೋಷಣೆಗಳಿಗಿಂತ (ಗ್ಯಾರಂಟಿ) ಹೆಚ್ಚಾಗಿ ನಾಯಕತ್ವ ಪರಿಣಾಮ ಬೀರಿದೆ. ಇದು ಲೋಕಸಭಾ ಚುನಾವಣೆಗೂ ಪರಿಣಾಮ ಬೀರಲಿದೆ. ಈ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಕೆಲಸ ಮಾಡಲ್ಲ ಅನ್ನೋದು ಗೊತ್ತಾಗಿದೆ ಎಂದು ಕಾಂಗ್ರೆಸ್​ ವಿರುದ್ಧ ಯಡಿಯೂರಪ್ಪ ಗುಡುಗಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments