Sunday, August 24, 2025
Google search engine
HomeUncategorizedದರ್ಶನ್ ಮನೆಯ ನಾಯಿ ಕಚ್ಚಿದ ಕೇಸ್ : ಉದ್ದೇಶಪೂರ್ವಕವಾಗಿ ನಾಯಿ ಛೂ ಬಿಟ್ಟಿದ್ದಾರೆ ಎಂದ ಮಹಿಳೆ

ದರ್ಶನ್ ಮನೆಯ ನಾಯಿ ಕಚ್ಚಿದ ಕೇಸ್ : ಉದ್ದೇಶಪೂರ್ವಕವಾಗಿ ನಾಯಿ ಛೂ ಬಿಟ್ಟಿದ್ದಾರೆ ಎಂದ ಮಹಿಳೆ

ಬೆಂಗಳೂರು : ನಟ ದರ್ಶನ್ ತೂಗುದೀಪ ಅವರ ಮನೆಯಲ್ಲಿ‌ ಸಾಕಿದ್ದ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣದಲ್ಲಿ ಮುಂಜಾನೆ ಹೈಡ್ರಾಮ ನಡೆದಿತ್ತು. ಆರ್.ಆರ್ ನಗರ ಪೊಲೀಸ್ ರು ವಿಚಾರಣೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದರ ನಡುವೆ ಮಹಿಳೆ ತನಿಖೆ ಸಹಕಾರ ನೀಡಿದ್ದಾರೆ.

ಅಮಿತಾ ಜಿಂದಾಲ್ ಎಂಬುವವರಿಗೆ ದರ್ಶನ್ ಮನೆಯಲ್ಲಿ‌ ಸಾಕಿದ್ದ ನಾಯಿ ಕಚ್ಚಿತ್ತು. ಈಕೆಯನ್ನು ಪೊಲೀಸರು ಮಹಜರ್ ಮತ್ತು ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ದರು. ಇವರು ಬೆಳ್ಳಂ ಬೆಳಗ್ಗೆ ಸರಿಸುಮಾರು 7.30ಗೆ ಠಾಣೆ ಹಾಜರಾಗಿದ್ದರು. ಅಷ್ಟೇ ತಾನೂ ವಿಚಾರಣೆಗೆ ಬಂದಿದ್ದೇನೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಠಾಣೆಯ ಬಾಗಿಲಲ್ಲೇ ನಿಂತು‌ ಮೇಲಿಂದ ಮೇಲೆ ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡುತ್ತಿದ್ದರು.

ಅಮಿತಾ ಜಿಂದಾಲರ ಈ ಪರಿ ಕ್ವಾಟ್ಲೇಗೆ ಬೇಸತ್ತ ಪೊಲೀಸರು ದೌಡಾಯಿಸಿ ಬಂದು ಈಕೆಯನ್ನು ದರ್ಶನ್ ಮನೆಯ ಬಳಿಗೆ ಕರೆದುಕೊಂಡು ಹೋದರು. ಅಮಿತಾಗೆ ನಾಯಿ‌ಕಚ್ಚಿದ್ದೆಲ್ಲಿ ಎಂದು ತೋರಿಸುವಂತೆ ಹೇಳಿದರು. ಆ ಸ್ಥಳದ ಮಹಜರ್ ಮಾಡಿ ಇಬ್ಬರು ಸಾಕ್ಷಿಗಳ ಸಹಿಯನ್ನು ಪಡೆದ ಪೊಲೀಸರು ಹೇಳಿಕೆ ದಾಖಲಿಸಲು ಠಾಣೆಗೆ ಬರುವಂತೆ ಸೂಚನೆಯನ್ನು‌ ನೀಡಿದರು.

ಬೇಕು ಅಂತಲೇ ನಾಯಿ ಛೂ ಬಿಟ್ರು

ಮಹಜರ್ ಕಾರ್ಯ ಪೂರ್ಣವಾಗಿದ್ದು ಅಮಿತಾ ಜಿಂದಾಲ್ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ದರ್ಶನ್ ಮನೆಯ ಸಿಬ್ಬಂದಿ ಮತ್ತು ದರ್ಶನ್ ರನ್ನು ಕರೆಸಿ ತನಿಖೆಯನ್ನ ಮಾಡಬೇಕಾಗಿದೆ. ಮಹಿಳೆ ನೇರಾವಾಗಿ ದರ್ಶನ್ ರವರ ಮನೆಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ನಾಯಿಯನ್ನು ಛೂ ಬಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಈ ವಿಚಾರದಲ್ಲಿ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದರ್ಶನ್ ಹೇಳಿಕೆ ಬಳಿಕ ಕೇಸ್ ಅಂತ್ಯ?

ಸದ್ಯ ರಾಜರಾಜೇಶ್ವರಿ ನಗರ ಪೊಲೀಸರು ನಾಯಿ ಕಚ್ಚಿದ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.  ಅದೇನಾದ್ರು ದರ್ಶನ್ ತೂಗುದೀಪ ಹೆಸರು ಈ ಕೇಸ್ ನಲ್ಲಿ ತಗ್ಲಾಕಿಕೊಂಡಿರುವಿದರಿಂದ ದರ್ಶನ್ ತನ್ನ ಹೇಳಿಕೆ ನೀಡಬೇಕಿದ್ದೂ ಆ ಬಳಿಕವಷ್ಟೇ ಈ ಕೇಸ್ ಗೆ ತಾರ್ಕಿಕ ಅಂತ್ಯ ನೀಡಲು ಪೊಲೀಸರಿಂದ ಸಾಧ್ಯವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments