ಬೆಂಗಳೂರು: ಇಂದು ರಾಜ್ಯದ್ಯಾಂತ ಏರ್ಟೆಲ್ ನೆಟ್ವರ್ಕ್ ಸೇರಿದಂತೆ ವಿವಿಧ ನೆಟ್ವರ್ಕ್ ನ ಸಿಮ್ಕಾರ್ಡ್ ಬಳಕೆದಾರರಿಗೆ ಸೈರನ್ ಅಲರ್ಟ್ ಶಬ್ದ ಕೇಳಿ ಬೆಚ್ಚಿಬಿದ್ದಿರುವ ಘಟನೆ ಎಲ್ಲೆಡೆ ನಡೆದಿದೆ.
ಇಂದು ಬೆಳಗ್ಗೆ 11.58ರ ಹೊತ್ತಿಗೆ ಮತ್ತು ಮಧ್ಯಾಹ್ನ 12.12ರ ಹೊತ್ತಿಗೆ ಎರಡೆರಡು ಬಾರಿ ರಾಜ್ಯದ ಬಹುತೇಕರ ಮೊಬೈಲ್ಗೆ ಬೀಪ್ ಸೌಂಡ್ ಜತೆಯಲ್ಲಿ ಎಚ್ಚರಿಕೆ ಸಂದೇಶವೊಂದು ಬಂದಿದೆ. ಇದರ ಬಗ್ಗೆ ಯಾರಿಗೆ ಮೊದಲೇ ಅರಿವು ಇರಲಿಲ್ಲವೋ ಅವರು ಒಮ್ಮೆ ಗಾಬರಿಯಾಗಿರುವುದಂತೂ ಸತ್ಯ. ಆದರೆ, ಗಾಬರಿ ಪಡುವ ಅವಶ್ಯಕತೆ ಇಲ್ಲ.
ಸೈರನ್ ಸಂದೇಶದ ಕುರಿತು ಈ ಮೊದಲೇ ವಿವಿಧ ನೆಟ್ವರ್ಕ್ ನ ಮೊಬೈಲ್ ಬಳಕೆದಾರರಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ವತಿಯಿಂದ ಸಂದೇಶ ಬಂದಿತ್ತು. ಈ ಸಂದೇಶದಲ್ಲಿ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸೈರನ್ ಅಲರ್ಟ್ ಸಂದೇಶ ಇದಾಗಿದೆ.
ಇದನ್ನೂ ಓದಿ: ಹತ್ತಿ ಖರೀದಿ ಮಾಡಿ ಅನ್ನದಾತರಿಗೆ ಕೋಟಿ ಕೋಟಿ ಪಂಗನಾಮ!
ಗ್ರಾಹಕರ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ.
ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶ ಮೆಸೇಜ್ನಲ್ಲಿದೆ. ಸಿಸ್ಟಮ್ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಬದ್ಧತೆಯೂ ಹೌದು ಎಂದು ದೂರಸಂಪರ್ಕ ಇಲಾಖೆ ಮೆಸೇಜ್ ಮೂಲಕ ತಿಳಿಸಿದೆ.