Friday, August 29, 2025
HomeUncategorizedರಾಜ್ಯದ್ಯಂತ ಮೊಬೈಲ್​ ಬಳಕೆದಾರರಿಗೆ ಸೈರನ್​ ಅಲರ್ಟ್​! ಬೆಚ್ಚಿಬಿದ್ದ ಗ್ರಾಹಕರು

ರಾಜ್ಯದ್ಯಂತ ಮೊಬೈಲ್​ ಬಳಕೆದಾರರಿಗೆ ಸೈರನ್​ ಅಲರ್ಟ್​! ಬೆಚ್ಚಿಬಿದ್ದ ಗ್ರಾಹಕರು

ಬೆಂಗಳೂರು: ಇಂದು ರಾಜ್ಯದ್ಯಾಂತ ಏರ್​ಟೆಲ್​​ ನೆಟ್ವರ್ಕ್​ ಸೇರಿದಂತೆ ವಿವಿಧ ನೆಟ್ವರ್ಕ್​ ನ ಸಿಮ್​ಕಾರ್ಡ್​ ಬಳಕೆದಾರರಿಗೆ ಸೈರನ್​ ಅಲರ್ಟ್​ ಶಬ್ದ ಕೇಳಿ ಬೆಚ್ಚಿಬಿದ್ದಿರುವ ಘಟನೆ ಎಲ್ಲೆಡೆ ನಡೆದಿದೆ.

ಇಂದು ಬೆಳಗ್ಗೆ 11.58ರ ಹೊತ್ತಿಗೆ ಮತ್ತು ಮಧ್ಯಾಹ್ನ 12.12ರ ಹೊತ್ತಿಗೆ ಎರಡೆರಡು ಬಾರಿ ರಾಜ್ಯದ ಬಹುತೇಕರ ಮೊಬೈಲ್​ಗೆ ಬೀಪ್ ಸೌಂಡ್​ ಜತೆಯಲ್ಲಿ ಎಚ್ಚರಿಕೆ ಸಂದೇಶವೊಂದು ಬಂದಿದೆ. ಇದರ ಬಗ್ಗೆ ಯಾರಿಗೆ ಮೊದಲೇ ಅರಿವು ಇರಲಿಲ್ಲವೋ ಅವರು ಒಮ್ಮೆ ಗಾಬರಿಯಾಗಿರುವುದಂತೂ ಸತ್ಯ. ಆದರೆ, ಗಾಬರಿ ಪಡುವ ಅವಶ್ಯಕತೆ ಇಲ್ಲ.

ಸೈರನ್​ ಸಂದೇಶದ ಕುರಿತು ಈ ಮೊದಲೇ ವಿವಿಧ ನೆಟ್ವರ್ಕ್​ ನ ಮೊಬೈಲ್​ ಬಳಕೆದಾರರಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ವತಿಯಿಂದ ಸಂದೇಶ ಬಂದಿತ್ತು. ಈ ಸಂದೇಶದಲ್ಲಿ  ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸೈರನ್​ ಅಲರ್ಟ್​ ಸಂದೇಶ ಇದಾಗಿದೆ.

ಇದನ್ನೂ ಓದಿ: ಹತ್ತಿ ಖರೀದಿ ಮಾಡಿ ಅನ್ನದಾತರಿಗೆ ಕೋಟಿ ಕೋಟಿ ಪಂಗನಾಮ!

ಗ್ರಾಹಕರ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ.

ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶ ಮೆಸೇಜ್​ನಲ್ಲಿದೆ. ಸಿಸ್ಟಮ್‌ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಬದ್ಧತೆಯೂ ಹೌದು ಎಂದು ದೂರಸಂಪರ್ಕ ಇಲಾಖೆ ಮೆಸೇಜ್​ ಮೂಲಕ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments