Site icon PowerTV

ಬೈಕ್, ಬಸ್ ನಡುವೆ ಮುಖಾಮುಖಿ ಡಿಕ್ಕಿ; ದಂಪತಿ ಸಾವು

ರಾಮನಗರ : ಚಲಿಸುತ್ತಿದ್ದ ಬೈಕ್ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಹಿನ್ನೆಲೆ ದಂತಿಗಳು ಸಾಮನ್ನಪ್ಪಿರುವ ದುರ್ಘಟನೆ ಕನಕಪುರ ತಾಲೂಕಿನ ಕೆಂಕೇರಮ್ಮ ದೇವಾಲಯದ ಬಳಿ ನಡೆದಿದೆ.

ಮಹದೇಶ್ವರ ಬೆಟ್ಟದ ನಿವಾಸಿಗಳಾದ ಕುಮಾರ್ (23) ಹಾಗೂ ನಾಗಮ್ಮ (19) ಮೃತ ದುರ್ದೈವಿಗಳು. ಎಂಬ ದಂಪತಿಗಳು ನಿನ್ನೆ ರಾತ್ರಿ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ಕೆಂಕೇರಮ್ಮ ದೇವಸ್ಥಾನದ ಬಳಿ ಬಸ್​ವೊಂದಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ.

ಇದನ್ನು ಓದಿ : ವಿಚ್ಚೇದನ ಕೋರಿ ಅರ್ಜಿ; ಎರಡು ಜೋಡಿಗಳನ್ನು ಮತ್ತೆ ಒಂದು ಮಾಡಿದ ನ್ಯಾಯಾಧೀಶರು

ಈ ಅಪಘಾತದ ಪರಿಣಾಮ ಬೈಕ್​ನಲ್ಲಿ ಬಂದಿದ್ದ ಕುಮಾರ್ ಮತ್ತಿ ನಾಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಈ ಘಟನಾ ಸಂಬಂಧ ಕನಕಪುರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version