Site icon PowerTV

ಯುವ ಕಬ್ಬಡಿ ಆಟಗಾರ ಆತ್ಮಹತ್ಯೆ

ಮಂಗಳೂರು : ಯುವ ಕಬ್ಬಡಿ ಆಟಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ ನಡೆದಿದೆ.

ಪುದುವೆಟ್ಟ ನಿವಾಸಿ ಸ್ವರಾಜ್ (24) ಮೃತ ದುರ್ದೈವಿ. ಎಂಬ ಯುವಕ ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅಷ್ಟೇ ಅಲ್ಲದೆ ಜಿಲ್ಲಾ ಮಟ್ಟದ ಕಬ್ಬಡಿ ತಂಡದಲ್ಲಿ ಪ್ರಸಿದ್ಧಿ ಸಹ ಪಡೆದಿದ್ದ ಸ್ವರಾಜ್.

ಇದನ್ನು ಓದಿ : ಕಿಚ್ಚನ ಹುಟ್ಟುಹಬ್ಬಕ್ಕೆ ಅರಸು ಕ್ರಿಯೇಷನ್ಸ್ ಪ್ರೀತಿಯ ಉಡುಗೊರೆ

ಆದರೆ ಇಂದು ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನಾ ಸಂಬಂಧ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version