Site icon PowerTV

ನಿರಂತರ ಮಳೆಯಿಂದ ಮುಳುಗಡೆಯಾದ ಕುಂಡಲ್ ಸೇತುವೆ

ಉತ್ತರ ಕನ್ನಡ : ಉತ್ತರಕನ್ನಡ ಜಿಲ್ಲೆಯಾದ್ಯಂತ ವರುಣನ ಅರ್ಭಟ ಮುಂದುವರೆದಿದ್ದು, ಕಾನೇರಿ ಜಲಾಶಯ ಭರ್ತಿಯಾದ ಹಿನ್ನೇಲೆ ಮುಳುಗಡೆಯಾದ ಕುಂಡಲ್ ಸೇತುವೆ.

ಕೆಲ ದಿನಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಕಂಗಲಾಗಿರುವ ಗ್ರಾಮಾಸ್ಥರು. ಅದರ ಬೆನ್ನಲ್ಲೇ ಕಾನೇರಿ ಜಲಾಶಯ ಭರ್ತಿಯಾಗಿದ್ದು ಕುಂಡಲ್ ಸೇತುವೆ ಮುಳುಗಡೆಯಾಗಿ ಹೋಗಿದೆ. ಅದರಿಂದ ಮನೆಯಿಂದ ಆಚೆ ಬರಲಾಗದೆ ಪರದಾಡುತ್ತಿರುವ ಜನರು.

ಇದನ್ನು ಓದಿ : ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ : ಚಿಪ್ಸ್​ ಫ್ಯಾಕ್ಟರಿ ಬೆಂಕಿಗಾಹತಿ!

ದೋಣಿಗಳ ಮೂಲಕ ಗ್ರಾಮಾಸ್ಥರ ಸ್ಥಳಾಂತರ

ಅದರಿಂದ ಕುರುವಾಲಿ,ನವರ ಹಾಗೂ ಆಂಬಾಳ ಗ್ರಾಮಗಳ ಸಂಪರ್ಕ ಕೂಡ ಸೇತುವೆ ಮುಳುಗಡೆಯಿಂದ ಬಂದ್ ಆಗಿ ಹೋಗಿದೆ. ಹಾಗಾಗಿ ಓಡಾಡಲು ದಾರಿಯಿಲ್ಲದೆ ಒದ್ದಾಡುತ್ತಿರುವ ಜನರನ್ನು ರಾಪ್ಟಿಂಗ್ ದೋಣಿ ಮೂಲಕ ಎತ್ತರದ ಪ್ರದೇಶಗಳಿಗೆ ಸ್ಠಳಾಂತರಿಸಲಾಗುತ್ತಿದೆ.

Exit mobile version