Site icon PowerTV

ಬಾಕಿ ವೇತನ ಬಿಡುಗಡೆ ಭರವಸೆ: 108 ಆ್ಯಂಬುಲೆನ್ಸ್ ಮುಷ್ಕರ ವಾಪಾಸ್​!

 

ಬೆಂಗಳೂರು : ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಒತ್ತಾಯಿಸಿ 108 ಆ್ಯಂಬುಲೆನ್ಸ್ ಚಾಲಕರು ನಡೆಸುತ್ತಿದ್ದ ಮುಷ್ಕರ ಸಚಿವರ ಭರವಸೆ ಮೇರೆಗೆ ಹಿಂಪಡೆದಿದ್ದಾರೆ.

ಇದನ್ನೂ ಓದಿ : ಇಂದು ಬೆಂಗಳೂರು ಯುನಿವರ್ಸಿಟಿ ಬಂದ್ : ವಿದ್ಯಾರ್ಥಿಗಳಿಂದ ಪ್ರತಿಭಟನೆ

ವೇತನ ಬಾಕಿಯಿದ್ದ ಹಿನ್ನಲೆ 108 ಆ್ಯಂಬುಲೆನ್ಸ್​ ಚಾಲಕರು, ಟೆಂಡರ್ ಹೊಂದಿರುವ ಜಿವಿಕೆ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ವಿರುದ್ದ ಸಿಡಿದೆದಿದ್ದು ಜುಲೈ 8 ರಂದು ಆ್ಯಂಬುಲೆನ್ಸ್​ಗಳನ್ನು ರಸ್ತೆಗಿಳಿಸದೆ ಸಾಮೂಹಿಕ ರಜೆ ಹಾಕುವಂತೆ ಕರೆ ನೀಡಿದ್ದರು.

ಈ ಹಿನ್ನೆಲೆ, ಜುಲೈ 7 ರಂದು ಸಿಬ್ಬಂದಿಗಳು ಮತ್ತು ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವರಾದ ದಿನೇಶ್​ ಗುಂಡೂರಾವ್​ ಸಭೆ ನಡೆಸಿ ಬಾಕಿ ಮೊತ್ತ ಬಿಡುಗಡೆಗೊಳಿಸುವ ಭರವಸೆಯನ್ನು ನೀಡಿದ್ದರು,

ಸೋಮವಾರ ಸಂಜೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್​ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಯಿತು. ಸಭೆಯ ಬಳಿಕ, ಸಚಿವರ ಭರವಸೆಯಂತೆ ಆರೋಗ್ಯ ಇಲಾಖೆ ಮೊದಲ ಕಂತಿನಲ್ಲಿ 14 ಕೋಟಿ ಬಿಡುಗಡೆ ಮಾಡಿದ್ದು ಇನ್ನೂ ಬಾಕಿ ವೇತನವನ್ನು ಇಂದು ಸಂಜೆ ಒಳಗೆ ಪಾವತಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

Exit mobile version