Site icon PowerTV

ಜಸ್ಟ್ 485 ರೂಪಾಯಿಗೆ ಇಬ್ಬರನ್ನು ಕೊಂದ ಗಾಂಜಾ ವ್ಯಸನಿ

ಮೈಸೂರು : ಕೇವಲ 485 ರೂಪಾಯಿಗೆ ಗಾಂಜಾ ವ್ಯಸನಿಯೊಬ್ಬ ಇಬ್ಬರನ್ನು ಕೊಲೆ‌ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದ್ದ ಡಬಲ್ ಮರ್ಡರ್​​ ಮಿಸ್ಟ್ರಿ ಬಯಲಾಗಿದೆ. ಡಬ್ಬಲ್ ಮರ್ಡರ್ ಆರೋಪಿ ಅಭಿಷೇಕ್​​​ ನನ್ನ ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್ ಹಾಗೂ ಷಣ್ಮುಖ ಮೃತ ದುರ್ದೈವಿಗಳು. ಆರೋಪಿ ಅಭಿಷೇಕ್ ಕೊಲೆ ನಡೆದ ಪಕ್ಕದ ಬೀದಿಯ ನಿವಾಸಿಯಾಗಿದ್ದ. ಈತ ಗಾಂಜಾ ವ್ಯಸನಿಯಾಗಿದ್ದನು.​​​ ಕೇವಲ 485 ರೂಪಾಯಿಗೆ ಕೊಲೆ‌ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಇದನ್ನೂ ಓದಿ : ಅಪಾರ್ಟ್‍ಮೆಂಟ್​ನ 10ನೇ ಮಹಡಿಯಿಂದ ಹಾರಿ ಮಹಿಳೆ ಸಾವು

ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆರೋಪಿ ಅಭಿಷೇಕ್ ವೆಂಕಟೇಶ್​ ಹಾಗೂ ಷಣ್ಮುಖನನ್ನು ಕೊಲೆ ಮಾಡಿ ವೆಂಕಟೇಶ್​​​ ಜೇಬಿನಲ್ಲಿದ್ದ 485 ರೂಪಾಯಿಯನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಭಿಷೇಕ್​​​ ಈ ಹಿಂದೆ ಕೆಲ ಕಳ್ಳತನ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು. ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಗಾಂಜಾ ವ್ಯಸನಿಯಾಗಿದ್ದ ಈತ, ಜನರಿಗೆ ಕಿರುಕುಳ ನೀಡುತ್ತಿದ್ದನು. ಹಣಕ್ಕಾಗಿ ವೆಂಕಟೇಶ್ ಹಾಗೂ ಷಣ್ಮುಖ ಅವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

Exit mobile version