Saturday, August 23, 2025
Google search engine
HomeUncategorizedನನಗೆ 'ಒಂದು ಪರ್ಸೆಂಟ್ ಪ್ರೀತಿ' ತೋರಿಸಲಿಲ್ಲ : ಜಗದೀಶ್ ಶೆಟ್ಟರ್

ನನಗೆ ‘ಒಂದು ಪರ್ಸೆಂಟ್ ಪ್ರೀತಿ’ ತೋರಿಸಲಿಲ್ಲ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಬಿ.ಎಲ್​ ಸಂತೋಷ್ ತಮ್ಮ ಮಾನಸ ಪುತ್ರನಿಗೆ ತೋರಿಸೋ ಪ್ರೀತಿಯಲ್ಲಿ  ನನಗೆ ಒಂದು ಪರ್ಸೆಂಟ್ ಪ್ರಿತಿ ತೋರಿಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ಎಲ್​ ಸಂತೋಷ್ ಅವರಿಗೆ ಒಂದೇ ಹೇಳೋದು. ನಿಮ್ಮ ಮಾನಸ ಪುತ್ರನಿಗೆ ತೋರಿಸೋ ಪ್ರೀತಿ ನನಗೆ ಒಂದು ಪರ್ಸೆಂಟ್ ತೋರಸಬೇಕಿತ್ತು. ಬಿಜೆಪಿಯಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಶುರುವಾಗಿದೆ ಎಂದು ಕುಟುಕಿದ್ದಾರೆ.

ಬಿ.ಎಲ್​.ಸಂತೋಷ್​ರನ್ನು ಕೇರಳದ ಉಸ್ತುವಾರಿಯಾಗಿ ಮಾಡಿದ್ದರು. ಸಂತೋಷ್ ಉಸ್ತುವಾರಿಯಾಗಿದ್ದಾಗ ಕೇರಳದಲ್ಲಿ ಒಂದು ಸ್ಥಾನವೂ ಬರಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಗೆ 2 ರಿಂದ 3 ಸ್ಥಾನ​ ಬಂತು ಅಷ್ಟೇ. ಇವತ್ತು ಕರ್ನಾಟಕದಲ್ಲಿ ಬಿ.ಎಲ್​​.ಸಂತೋಷ್​ ಕಾರಬಾರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ತಾಕತ್ತಿದ್ರೆ ‘ಲಿಂಗಾಯತರನ್ನ ಸಿಎಂ’ ಅಭ್ಯರ್ಥಿಯಾಗಿ ಘೋಷಿಸಲಿ : ಕಟೀಲ್ ಸವಾಲು

ಇದು ನನ್ನ ಕೊನೆ ಚುನಾವಣೆ

ಬಿಜೆಪಿಯೊಳಗಿನ ವೇದನೆಯನ್ನು ಸಹಿಸಕೊಂಡರೆ ಜಗದೀಶ್​ ಶೆಟ್ಟರ್ ಅವರಿಗೆ ಮಾನ ಮರ್ಯಾದೆ ಇಲ್ಲ ಅಂತ ಕಾಣ್ತಾರೆ. ನಾನು 70 ವರ್ಷ ಆದ ಮೇಲೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇದು ನನ್ನ ಕೊನೆ ಚುನಾವಣೆ. ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಜಗದೀಶ್​ ಶೆಟ್ಟರ್​​ ಭಾವುಕರಾಗಿದ್ದಾರೆ.

ನನ್ನನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಹೇಳಿದ್ದೇನೆ. ಬಿಜೆಪಿ ಪಕ್ಷ ನಶಿಸಿ ಹೋಗುತ್ತಿದೆ. ಪಕ್ಷವನ್ನು ಮುಗಿಸಲು ಕಾಯುತ್ತಿದ್ದಾರೆ. ಬಿ.ಎಲ್ ಸಂತೋಷ್ ಜೊತೆ ಒಂದೊಂದೆ ಹೆಸರು ಹೊರ ಬರುತ್ತದೆ ಎಂದು ಜಗದೀಶ್ ಶೆಟ್ಟರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments