ನವದೆಹಲಿ : ಅದಾನಿ ವಿಚಾರದಲ್ಲಿ ಜೆಪಿಸಿಗಾಗಿ ತಿಂಗಳುಗಟ್ಟಲೆ ಹೋರಾಟ ನಡೆಸುತ್ತಿದ್ದೇವೆ. ಅವರಿಗೆ ಬಹುಮತವಿದೆ. ಆದರೆ, ಬಿಜೆಪಿಗೆ ಏನೋ ಎಂಬ ಭಯವಿದೆ. ಅದಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ವಿಜಯ್ ಚೌಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಸೂರತ್ ನ್ಯಾಯಾಲಯ ಶಿಕ್ಷೆ ವಿಧಿಸಿರುವ ವಿಚಾರವನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಕೇಸ್ ಗಳನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.
राज्यसभा में विपक्ष के नेता श्री @kharge के साथ विपक्ष के सांसदों का 'मोदी-शाही' के खिलाफ पार्लियामेंट हाउस से विजय चौक तक मार्च।
इस तानाशाही के खिलाफ हम लड़ते रहेंगे। PM मोदी को अडानी महाघोटाले पर जवाब देना ही होगा। pic.twitter.com/plFRhCIaMn
— Congress (@INCIndia) March 24, 2023
ಪ್ರಜಾಪ್ರಭುತ್ವ ಅಪಾಯದಲ್ಲಿದೆ
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆರೋಪಿಸಿ ಮತ್ತು ಅದಾನಿ ಪ್ರಕರಣವನ್ನು ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ದೆಹಲಿಯ ಸಂಸತ್ತಿನಿಂದ ವಿಜಯ್ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿವೆ.
तानाशाही नहीं चलेगी pic.twitter.com/n5sMjzsdMK
— Congress (@INCIndia) March 24, 2023
ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದ ನಂತರ ಸಿಪಿಐ, ಸಿಪಿಎಂ, ಉದ್ದವ್ ಠಾಕ್ರೆ ಬಣದ ಶಿವಸೇನೆ, ಜೆಡಿಯು ಮತ್ತು ಆಮ್ ಆದ್ಮಿ ಪಾರ್ಟಿಯಂತಹ ಪಕ್ಷಗಳ ಮುಖಂಡರು ವಿಜಯ್ ಚೌಕ್ ಗೆ ಮೆರವಣಿಗೆ ನಡೆಸಿದರು. ನಾವು ಜೆಪಿಸಿ ಮತ್ತು ಎಲ್ಐಸಿ ಉಳಿಸಿ ಎಂದು ಒತ್ತಾಯಿಸುತ್ತೇವೆ ಮತ್ತು ಡೆಮಾಕ್ರೆಸಿ ಇನ್ ಡೇಂಜರ್ ಎಂದು ಬರೆದಿರುವ ಬೃಹತ್ ಬ್ಯಾನರ್ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
Hey! Just launched TurboJot — the AI-powered outreach tool that actually wrote and submitted this message. It auto-fills forms with human-like messaging and precision targeting, consistently driving more conversions than email or ads. Book a demo on our site: https://go.turbojot.com/discover