Friday, August 22, 2025
Google search engine
HomeUncategorizedಬೆಳಗಾವಿಯಲ್ಲಿ ಬಿಜೆಪಿಗೆ ಮಗ್ಗುಲ ಮುಳ್ಳಾದ ಜಾರಕಿಹೊಳಿ ಬ್ರದರ್ಸ್

ಬೆಳಗಾವಿಯಲ್ಲಿ ಬಿಜೆಪಿಗೆ ಮಗ್ಗುಲ ಮುಳ್ಳಾದ ಜಾರಕಿಹೊಳಿ ಬ್ರದರ್ಸ್

ಬೆಳಗಾವಿ : ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿ ಇದ ಸಮ್ಮಿಶ್ರ ಸರ್ಕಾರ ಕೆಡವಿ. ಬಿಜೆಪಿ ಅರಳಿಸುವಂತೆ ಮಾಡಿದ ಜಾರಕಿಹೊಳಿ ಬ್ರದರ್ಸ್ ಈಗ ಬಿಜೆಪಿಗೇ ಮಗ್ಗುಲ ಮುಳ್ಳಾಗಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದಕ್ಕೆ ಪೂರಕವಾಗಿ ಬೆಳಗಾವಿ ಬಿಜೆಪಿ ನಾಯಕರು ಗೌಪ್ಯಸಭೆ ನಡೆಸಿದ್ದಾರೆ.ಸತತ ಮೂರು ತಾಸು ಸಭೆ ನಡೆಸಿದ ಬಳಿಕ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಭೆಯ ಗುಟ್ಟು ಬಿಟ್ಟು ಕೊಡಲಿಲ್ಲ.. ಸಭೆಗೆ ಜಾರಕಿಹೊಳಿ ಬ್ರದರ್ಸ್ ಗೈರಾಗಿದ್ದಾರೆ ಯಾಕೆಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ ಇದು ಸಭೆಯಲ್ಲ. ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿಗೆ ನೈತಿಕ ಬೆಂಬಲ ನೀಡಲು ಬಂದಿದ್ದೇವೆ ಅಷ್ಟೇ ಎಂದಿದ್ದಾರೆ.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಪಕ್ಷದ ಆದೇಶ ‌ಹಿನ್ನೆಲೆಯಲ್ಲಿ ಸತೀಶ ಜಾರಕಿಹೊಳಿ‌ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಪ್ರತಿಭಟನೆ ನಂತರ ಸತೀಶ್ ಜಾರಕಿಹೊಳಿ ಹೇಳಿಕೆ ವಾಪಸ್ ಪಡೆದಿದ್ದರು. ಆದ್ರೆ, ನಿನ್ನೆ ಘಟಪ್ರಭಾದಲ್ಲಿ ನನ್ನ ಕಾರ್ ಮೇಲೆ ಅಟ್ಯಾಕ್ ಆಗಿತ್ತು.ನಮ್ಮ ನಾಯಕರು ಎಲ್ಲರೂ ಫೋನ್ ಮಾಡಿದ್ರು.ನಾನೇ ಬಂದು ಎಲ್ಲಾ ಮಾಹಿತಿ ಕೊಡ್ತೀನಿ ಅಂತ ಹೇಳಿದೆ. ಘಟನೆ ವಿವರವಾಗಿ ಹೇಳಿದ್ದೇನೆ. ಮುಗ್ಧ ಜನರನ್ನು ಬಳಸಿಕೊಂಡು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನ ನಡೆದಿದೆ. ಅವರು ಯಾರು ಏನ್ ಅಂತ ನನಗೆ ಎಲ್ಲಾ ಗೊತ್ತಿದೆ. ಈ ಘಟನೆ ಎಲ್ಲಾ ಪೂರ್ವ ನಿಯೋಜಿತವಾಗಿದೆ. ಇದೊಂದು ಕೆಟ್ಟ ಸಂಪ್ರದಾಯ ಎಂದರು.

ಒಟ್ಟಾರೆ ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಹೋಗಿ ಬೆಳಗಾವಿ ಬಿಜೆಪಿ ನಾಯಕರು ಇಕಟ್ಟಿಗೆ ಸಿಲುಕ್ಕಿದ್ದಾರೆ. ಆ ಹೇಳಿಕೆಯನ್ನು ಹೈಫ್ ಮಾಡಲು ಹೋದ್ರೆ ಜಾರಕಿಹೊಳಿ ಬ್ರದರ್ಸ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಸುಮ್ಮನೆ ಇದ್ರೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಗಾಗಬೇಕಾಗುತ್ತದೆ ಎಂಬಂತಾಗಿದೆ.

ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ

RELATED ARTICLES
- Advertisment -
Google search engine

Most Popular

Recent Comments