Site icon PowerTV

ರಾಜ್ಯದಲ್ಲಿ ಮುಂದುವರೆದ ಲೋಕಾಯುಕ್ತ ದಾಳಿ.!

ಬೆಂಗಳೂರು: ಕೆಲವು ತಿಂಗಳಿನಿಂದ ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ದಾಳಿ ರಾಜ್ಯದಲ್ಲಿ ಮುಂದುವರೆದಿದೆ.

ಬೆಂಗಳೂರಿನ ವರ್ತೂರು ಸಬ್ ರಿಜಿಸ್ಟರ್ ಕಛೇರಿ ಬ್ರೋಕರ್ ಗಳ ಹಾವಳಿ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 3.45 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ.

ಒಟ್ಟು ಈ ದಾಳಿಯಲ್ಲಿ 8 ಜನ ಬ್ರೋಕರ್ ಗಳನ್ನು ವಶಕ್ಕೆ ಪಡೆದ ಲೋಕಾಯುಕ್ತ ಟೀಂ, ಪ್ರತಿ ರಿಜಿಸ್ಟರ್ ಗೆ ಲಂಚ ಪಡೆಯುತ್ತಿದ್ದ ಬ್ರೋಕರ್ ಗಳು, ಲಂಚ ಕೊಡದಿದ್ದರೆ ಕೆಲಸಕ್ಕೆ ಬ್ರೋಕರ್​ಗಳು ಅಡ್ಡಿ ಪಡಿಸ್ತಿದ್ದರು.

ಸಾಲು ಸಾಲು ದೂರು ಹಿನ್ನಲೆ ದಾಳಿ ನಡೆಸಿರೊ ಲೋಕಾಯುಕ್ತ ಬೆಂಗಳೂರಿನ ಡಿವಾಯ್​ಎಸ್ಪಿ ಅಂತೋಣಿ ಜಾನ್, ಇನ್ಸ್ಪೆಕ್ಟರ್ ಸತೀಶ್ KG ನೇತೃತ್ವದಲ್ಲಿ ಬೆಂಗಳೂರಿನ ಬನ್ನೇರುಘಟ್ಟ, ಯಲಹಂಕ, ಮಹದೇಪುರ, ವರ್ತೂರು, ದೊಮ್ಮಲೂರು, ಬೊಮ್ಮನಹಳ್ಳಿ, ಬೇಗೂರು, ಜೆಪಿನಗರ, ಬನಶಂಕರಿ, ಬಸವನಗುಡಿ, ಕೆಂಗೇರಿ, ನಾಗಾವಾರ ಸಬ್ ರಿಜಿಸ್ಟರ್ ಆಫೀಸ್ ಮೇಲೆ ದಾಳಿ ನಡೆಸಲಾಗಿದೆ.

Exit mobile version