Site icon PowerTV

ನಟ ಚೇತನ್​ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಾ. ವೀರೇಂದ್ರ ಹೆಗ್ಗಡೆ

ಮಂಗಳೂರು: ದೈವಾರಾಧನೆ ಬಗ್ಗೆ ನಟ ಚೇತನ ವಿವಾದಾತ್ಮಕ ಹೇಳಿಕೆ ವಿಚಾರವಾಗಿ, ಕಾಂತಾರ ಸಿನೆಮಾ ನೋಡಿದ ಬಳಿಕ ಪ್ರತಿಕ್ರಿಯೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ರವರು ಧರ್ಮದ ಭಾಗ ಹೌದೋ ಅಲ್ಲವೋ ಅದು ಗೊತ್ತಿಲ್ಲ ಎಂದರು.

ತುಳು ನಾಡಿನ ಅಥವಾ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ವಭಾವ ಅರಿಯದೇ ಮಾತಾನಾಡಿದರೆ ಅದು ಬೇರೆಯದೇ ಆಗುತ್ತದೆ. ಧರ್ಮದ ಮೂಲವನ್ನು ಹುಡುಕಿ ಹೋದರೆ ಎಲ್ಲೂ ಸಿಗುವುದಿಲ್ಲ. ನಮ್ಮ ನಂಬಿಕೆ ಆಚರಣೆ ನಡವಳಿಕೆಗಳು ಸ್ವಾಭಾವಿಕವಾಗಿ ನಮ್ಮಲ್ಲಿ ಬೆಳೆದು ಬಂದಿವೆ. ಇಲ್ಲಿ ಜೀವಿಸುವ ನಾವು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ ಹಾಗೂ ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆ ತಿಳಿದಿದ್ದಾರೂ ಗೊತ್ತಿಲ್ಲ.

ನಮ್ಮ ಎರಡು ಜಿಲ್ಲೆಯಲ್ಲಿ ವ್ಯಾಪಕವಾಗಿ ಇರುವ ನಂಬಿಕೆ ದೈವಾರಾಧನೆ, ಇಂದಿಗೂ ನಾವು ದೈವಾರಾದನೆ ಮಾಡುತ್ತೇವೆ. ದೈವದ ನುಡಿಗೆ ಗೌರವ ಕೊಡುತ್ತೇವೆ. ದೈವಗಳ ಮಾತಿಗೆ ಗೌರವ ಕೊಡುತ್ತೆವೆ. ಇನ್ನು ಧರ್ಮದ ಸೂಕ್ಷ್ಮತೆ ವಿಮರ್ಶೆ ಮಾಡುವ ಅಗತ್ಯ ವಿಲ್ಲ ಎಂದು ಮಂಗಳೂರಿನಲ್ಲಿ ಡಾ ಡಿ ವಿರೇಂದ್ರ ಹೆಗ್ಗಡೆ ಹೇಳಿಕೆ ನೀಡಿದ್ದಾರೆ.

Exit mobile version