Site icon PowerTV

ರಾಜ್ಯದಲ್ಲಿ 17ನೇ ದಿನ ‘ಜೋಡೊ’ ಅಬ್ಬರ

ರಾಯಚೂರು : ಭಾರತ್ ಜೋಡೋ ಯಾತ್ರೆ ರಾಯಚೂರಿಗೆ ಎಂಟ್ರಿಯಾದ ಹಿನ್ನೆಲೆಯಲ್ಲಿ ಗಿಲ್ಲೇಸೂಗೂರಿನಲ್ಲಿ ರೈತರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ.

ರೈತರೊಂದಿಗೆ ಸಂವಾದದ ನಂತರ ಸುದ್ದಿಗೋಷ್ಟಿ ನಡೆಸ್ತಿರುವ ಕೈ ನಾಯಕರು, ಡಬಲ್ ಇಂಜಿನ್ ಸರ್ಕಾರದಲ್ಲಿ, ಎರಡೂ ಸರ್ಕಾರಗಳು ಕೆಲಸ ಮಾಡಬೇಕು. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಜಾರಿಗಾಗಿ ಕಾಂಗ್ರೆಸ್ ಧ್ವನಿಗೆ ಎತ್ತಿತ್ತು. ಕಾಂಗ್ರೆಸ್ ಧ್ವನಿಗೆ ಮಣಿದು ಸುಗ್ರೀವಾಜ್ಞೆ ಮಾಡೋದಾಗಿ ಸರ್ಕಾರ ಹೇಳಿದೆ. ಅದನ್ನ ಕೂಡಲೇ ಕಾರ್ಯರೂಪಕ್ಕೆ ತರಬೇಕು ಎಂದರು.

ಇನ್ನು, ಮೂರು ವರ್ಷ ಮಲಗಿ ಈಗ ಜನ ಕಿತ್ತೆಸೆಯಬೇಕು ಎಂದು ನಿರ್ಧಾರ ಮಾಡಿದ್ದಾಗ ಸರ್ಕಾರ ಈ ತೀರ್ಮಾನ ಮಾಡಿದೆ . ಆ ಸಮುದಾಯಗಳ ಜನ, ಸ್ವಾಮೀಜಿಗಳು ಹಾಗೂ ಕಾಗ್ರೆಸ್ ಧ್ವನಿಗೆ ಮಣಿದು ಸಾಯಬಾರದು, ಕೋಲು ಮುರಿಯಬಾರದು ಎನ್ನುವಂತೆ ಮಾಡಿದ್ದೀರ. ಮೊಸಳೆ ಕಣ್ಣೀರಾಕಿ ಜನರ ಜೊತೆ ಆಟ ಆಡಬೇಡಿ. ನಿಮಗೆ ಈ ಜನಗಳ ಬಗ್ಗೆ ಕಾಳಜಿ ಇಲ್ಲ, ನಿಮಗೆ ಬದ್ದತೆ ಇಲ್ಲ ಎಂದು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ನಾವು ಹೇಳಿದ್ರೂ ಏನೂ ಮಾಡಲಿಲ್ಲ. ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ಅನ್ಯಾಯ ಮಾಡಿದ್ದೀರ. ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಕೂಡಲೇ ಜಾರಿಗೆ ತರುವಂತೆ ಒತ್ತಾಯ ಮಾಡಿದ್ದು, ಮೊದಲು ನೀವು ನುಡಿದಂತೆ ನಡೆಯಬೇಕು, ಕಾರ್ಯರೂಪಕ್ಕೆ ತರಬೇಕು. ನಿಮ್ಮ ಕೈಯಲ್ಲೇ ಅಧಿಕಾರ ಇದೆ, ಅದನ್ನ ಮಾಡಿ ಎಂದು ಡಿಕೆ ಶಿವಕುಮಾರ್​ ಒತ್ತಾಯ ಮಾಡಿದ್ದಾರೆ.

Exit mobile version