Site icon PowerTV

ರಾಜಧಾನಿ ಬೆಂಗಳೂರಲ್ಲಿ ಮುಂದುವರಿದ ಮಳೆ ಅಬ್ಬರ

ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ತಡರಾತ್ರಿ ಸುರಿದ ಮಹಾಮಳೆಗೆ ರಸ್ತೆಗಳು ಜಲಾವೃವಾಗಿದ್ದು, ಐಟಿ-ಬಿಟಿ‌ ಸಿಟಿ ತತ್ತರಿಸಿ ಹೋಗಿದೆ.

ನಗರದಲ್ಲಿ, ಅಂಡರ್‌ಪಾಸ್‌ಗಳು ಜಲಾವೃತವಾಗಿ, ವಾಹನ ಸವಾರರ ಪರದಾಟ ಮಾಡುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ್ದರಿಂದ, BBMP ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಬೆಂಗಳೂರಲ್ಲಿ ಸರಾಸರಿ 1.06 ಸೆಂ.ಮೀ ಮಳೆಯಾಗಿದ್ದು, ಗುಟ್ಟಹಳ್ಳಿಯಲ್ಲಿ 5.6 ಸೆಂ.ಮೀ, ಸಂಪಂಗಿರಾಮ ನಗರದಲ್ಲಿ 5 ಸೆಂ.ಮೀ, ದಯಾನಂದ ನಗರದಲ್ಲಿ 4.9 ಸೆಂ.ಮೀ, ಬಸವನಗುಡಿಯಲ್ಲಿ 4.7 ಸೆಂ.ಮೀ, ಹಂಪಿನಗರ 3.5 ಸೆಂ.ಮೀ, ವಿಶ್ವೇಶ್ವರಪುರ 3.4 ಸೆಂ.ಮೀ, ಕೋನೇನ ಅಗ್ರಹಾರ 3.3 ಸೇಂ.ಮಿ ಮಳೆ, ಕಮ್ಮನಹಳ್ಳಿ, ದೊಡ್ಡನೆಕುಂದಿ, ಅಗ್ರಹಾರ ದಾಸರಹಳ್ಳಿಯಲ್ಲಿ 3.15 ಸೆಂ.ಮೀ, ಲಾಲ್‌ ಬಾಗ್ 3.1 ಸೆಂ.ಮೀ, ಕೃಷ್ಣರಾಜಪುರದಲ್ಲಿ 3 ಸೆಂ.ಮೀ ಮಳೆ, ಕಾಟನ್‌ ಪೇಟೆ 2.9 ಸೆಂ.ಮೀ, ವಿದ್ಯಾಪೀಠದಲ್ಲಿ 2.6 ಸೆಂ.ಮಿ ಮಳೆಯಾಗದೆ.

Exit mobile version