Thursday, September 11, 2025
HomeUncategorizedಟಿಪ್ಪು ಕನ್ನಡಿಗ ಅಲ್ಲ, ನಮ್ಮ ಆಯ್ಕೆ ಒಡೆಯರ್​ ಎಂದ ಸಚಿವ ಆರ್​ ಅಶೋಕ್​

ಟಿಪ್ಪು ಕನ್ನಡಿಗ ಅಲ್ಲ, ನಮ್ಮ ಆಯ್ಕೆ ಒಡೆಯರ್​ ಎಂದ ಸಚಿವ ಆರ್​ ಅಶೋಕ್​

ಬೆಂಗಳೂರು: ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲವಾವಣೆ ಮಾಡಿ ಒಡೆಯರ್ ಎಕ್ಸ್​ಪ್ರೆಸ್​ ರೈಲು ಎಂದು ಹೆಸರು ಇಡಲಾಗಿದೆ. ಸರ್ಕಾರ ಒಳ್ಳೆಯ ಉದ್ದೇಶದಿಂದ ಈ ಹೆಸರು ಬದಲಾವಣೆ ಮಾಡಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸಮರ್ಥನೆ ಮಾಡಿಕೊಂಡರು.

ಕೇಂದ್ರ ಸರ್ಕಾರ ಟಿಪ್ಪು ಬದಲಿಗೆ ಒಡೆಯರ್​ ಎಂದು ರೈಲಿಗೆ ನಾಮಕರಣ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಒಳ್ಳೆಯ ಉದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ. ಮೈಸೂರು, ಮಂಡ್ಯ ಭಾಗಕ್ಕೆ ನೀರು ಕೊಟ್ಟವರು ಒಡೆಯರ್, ತಮ್ಮ ಒಡವೆ ಮಾರಿ ಕೆಆರ್‌ಎಸ್ ಕಟ್ಟಿ ಕರ್ಣರಾದರು ಅವರು ಇಂತಹ ವ್ಯಕ್ತಿಗಳ ಇಟ್ಟಿರುವುದು ಒಳ್ಳೆಯದು ಎಂದರು.

ಇನ್ನು ಮೊದಲ ವಿದ್ಯುತ್ ತಯಾರಿಕೆ ಮಾಡಿದ್ದು, ಸೋಪ್, ಸಕ್ಕರೆ ತಯಾರಿಕೆ ಎಲ್ಲವನ್ನ ಕರ್ನಾಟಕಕ್ಕೆ ಒಡೆಯರ್​ ಅವರು ಕೊಟ್ಟಿದ್ದಾರೆ. ಅವರ ಹೆಸರಲ್ಲೇ ಜಂಬೂ ಸವಾರಿ ಆರಂಭವಾಗಿದ್ದು, ಟಿಪ್ಪು ಕನ್ನಡಿಗ ಅಂತ ಒಪ್ಪಿಯೇ ಇಲ್ಲ. ಆತನ ಆಡಳಿತ ಭಾಷೆ ಪರ್ಶಿಯನ್. ಕಗ್ಗೊಲೆ ಮಾಡಿ, ಮತಾಂತರ ಮಾಡಿದ್ದಾನೆ. ಅಲ್ಲದೇ, ಚಲುವನಾರಾಯಣ ಸ್ವಾಮಿ ದೇವಸ್ಥಾನದ ಬಳಿ ಕೊಗ್ಗೊಲೆ ಮಾಡಿದ್ದಾನೆ. ಹಾಗಾಗಿ ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ ಎಂದು ಸಚಿವರು ತಿಳಿಸಿದರು.

ಇನ್ನು ರೈಲು ಹೆಸರು ಬದಲಾವಣೆಗೆ ಸಿದ್ದರಾಮಯ್ಯ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಇನ್ನು ನೂರು ಟ್ರೈನ್ ತಂದು ಟಿಪ್ಪು, ಲಾಡೆನ್, ಗಜನಿ ಮೊಹಮ್ಮದ್ ಎಂದು ರೈಲು ಓಡಿಸಲಿ. ಈ ಹೆಸರನ್ನ ರೈಲಿಗೆ ಇಟ್ರೆ ಜನರು ಮೆಚ್ತಾರೆ. ಅವರು ಅಧಿಕಾರಕ್ಕೆ ಬಂದಾಗ ಇಟ್ಟುಕೊಳ್ಳಲಿ. ನಮ್ಮ ಬೆಂಬಲ ಒಡೆಯರ್ ಅವರಿಗೆ ಮಾತ್ರ. ಮುಸ್ಲಿಂರು ಎಲ್ಲರೂ ಕೆಟ್ಟವರಲ್ಲ. ಪಿಎಫ್​ಐ ಹಾಗೂ ಇತರೆ ಸಂಘಟನೆಗಳನ್ನ ವಿರೋಧಿಸ್ತೇವೆ. ಹಾಗಂತ ಎಲ್ಲರನ್ನೂ ನಾವು ವಿರೋಧಿಸಲ್ಲ. ಒಂದು ವೇಳೆ ಅಲ್ಲಿ ವಾಸ ಮಾಡೋ ಜನ ಮನವಿ ಮಾಡಿದ್ರೆ ಬದಲಾವಣೆ ಮಾಡ್ತೀವಿ ಎಂದರು.

RELATED ARTICLES
- Advertisment -
Google search engine

Most Popular

Recent Comments