Site icon PowerTV

ಇಂದು ಅಧಿಕೃತವಾಗಿ ನೂತನ ಪಕ್ಷ ಘೋಷಣೆ ಮಾಡಲಿರುವ ಕೆಸಿಆರ್​

ತೆಲಂಗಾಣ:ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ಇಂದು ತಮ್ಮ ಭಾರತ ರಾಷ್ಟ್ರ ಸಮಿತಿ ಪಕ್ಷವನ್ನು ಪ್ರಾರಂಭಿಸಲಿದ್ದಾರೆ.

ಪಕ್ಷದ ಪ್ರಾರಂಭಕ್ಕೆ ಮುಹೂರ್ತವನ್ನು ಇಂದು ಮಧ್ಯಾಹ್ನ 1:19 ಕ್ಕೆ ನಿಗದಿಪಡಿಸಲಾಗಿದೆ. ಇದನ್ನು ಭಾರತೀಯ ರಾಷ್ಟ್ರ ಸಮಿತಿ ಎಂದು ಕರೆಯುವ ಸಾಧ್ಯತೆಯಿದೆ ಹೇಳಲಾಗುತ್ತಿದೆ.

ಈ ಸಂಬಂಧವಾಗಿ ನಿನ್ನೆ ರಾತ್ರಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೆಲಂಗಾಣಕ್ಕೆ ತೆರಳಿದ್ದು, ಇಂದು ನಡೆಯುವ ತೆಲಂಗಾಣದ ಕೆಸಿಆರ್ ಅವರ ನೂತನ ಪಕ್ಷದ ಅನಾವರಣದಲ್ಲಿ ಉಪಸ್ಥಿತರಿರಲಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿ ನಡೆದ ಟಿಆರ್‌ಎಸ್‌ನ ಸಾಮಾನ್ಯ ಸಭೆಯಲ್ಲಿ ಹೆಡಿಕೆ ತೆಲಂಗಾಣದ ಕೆಸಿಆರ್ ಅವರನ್ನು ಭೇಟಿ ಮಾಡಿದ್ದರು.

Exit mobile version