Sunday, September 7, 2025
HomeUncategorizedಮೂರು ತಿಂಗಳಿಗೊಮ್ಮೆ ಗಗನಕ್ಕೇರುತ್ತಿದೆ ವಿದ್ಯುತ್ ದರ ..!

ಮೂರು ತಿಂಗಳಿಗೊಮ್ಮೆ ಗಗನಕ್ಕೇರುತ್ತಿದೆ ವಿದ್ಯುತ್ ದರ ..!

ಬೆಂಗಳೂರು : ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗಕ್ಕೇರುತ್ತಿದೆ.ಜನಸಾಮಾನ್ಯರು ಅಂತೂ ಜೀವನ ಮಾಡೋಕೆ ಆಗ್ತಿಲ್ಲ.ಇದೀಗ ರಾಜ್ಯದ ಮಂದಿಗೆ ಮತ್ತೊಂದು ಶಾಕ್ ನೀಡಲಾಗಿದೆ.ಈಗಾಗಲೇ ಭಾರಿ ವಿದ್ಯುತ್ ದರ ಏರಿಕೆಯಿಂದ ತತ್ತರಿಸೋ ಜನ ಶನಿವಾರ ಹೆಚ್ಚುವರಿ ಶುಲ್ಕ ಕಟ್ಟಬೇಕಾದ ಸ್ಥಿತಿ ಎದುರಾಗಿದೆ. ಬೆಲೆ ಏರಿಕೆ ಬಿಸಿ ನಡುವೆ ಕೆಇಆರ್ಸಿ ಅಕ್ಟೋಬರ್ 1 ರಿಂದ ಅಂದರೆ ಶನಿವಾರದಿಂದ ಪ್ರತಿ ಯೂನಿಟ್ ಮೇಲೆ 23 ಪೈಸೆಯಿಂದ 43 ಪೈಸೆವರಿಗೆ ಏರಿಕೆ ಮಾಡಿ ಈಗಾಗಲೇ ಆದೇಶಿಸಿದೆ.

ರಾಜ್ಯದಲ್ಲಿ ಅಕ್ಟೋಬರ್ 1 ರಿಂದ ಮುಂದಿನ ಮೇ ಅಂತ್ಯದವರೆಗೆ ಎಸ್ಕಾಂಗಳು ಪ್ರತಿ ಯೂನಿಟ್‌ ವಿದ್ಯುತ್‌ ದರಕ್ಕೆ 24 ಪೈಸೆಯಿಂದ ರಿಂದ 43 ಪೈಸೆವರೆಗೆ ಹೆಚ್ಚುವರಿ ದರವನ್ನು ಇಂಧನ ಹೊಂದಾಣಿಕೆ ವೆಚ್ಚ ಶುಲ್ಕ ರೂಪದಲ್ಲಿ ಸಂಗ್ರಹಿಸಲು ಅವಕಾಶ ಕಲ್ಪಿಸಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಲಿದ್ದಲು ಖರೀದಿ ದರ ಏರಿಕೆಯಿಂದಾಗಿ ಎಸ್ಕಾಂಗಳಿಗೆ ಆರ್ಥಿಕ ಹೊರೆ ಬಿದ್ದಿದೆ. ಇದನ್ನು ಸರಿದೂಗಿಸಲು ಇಂಧನ ಹೊಂದಾಣಿಕೆ ವೆಚ್ಚ ಶುಲ್ಕ ಆರು- ಏಳು ತಿಂಗಳ ಅವಧಿಗೆ ಪ್ರತಿ ಯೂನಿಟ್‌ ವಿದ್ಯುತ್‌ ದರದ ಮೇಲೆ ಹೆಚ್ಚುವರಿ ದರ ವಿಧಿಸಲು ಕೆಇಆರ್‌ಸಿ ಅವಕಾಶ ನೀಡಿದೆ.

ಈ ಸಂಬಂಧ ಎಸ್ಕಾಂಗಳು ನಾನಾ ಪ್ರಮಾಣದಲ್ಲಿ ಎಫ್‌ಎಸಿ ಶುಲ್ಕ ಸಂಗ್ರಹಕ್ಕಾಗಿ ಅನುಮತಿ ಕೋರಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಅದರಂತೆ ಪ್ರತಿ ಯೂನಿಟ್‌ ದರ ಮೇಲೆ ಬೆಸ್ಕಾಂ ವ್ಯಾಪ್ತಿಯಲ್ಲಿ 43 ಪೈಸೆ, ಮೆಸ್ಕಾಂ 24 ಪೈಸೆ, ಸೆಸ್ಕ್‌ 35 ಪೈಸೆ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ ಪರಿಷ್ಕರಣೆ ಮಾಡಲಾಗಿದೆ‌‌.ಜನರಿಗೆ ಸಿಕ್ಕಾಪಟ್ಟೆ ವಿದ್ಯುತ್ ದರ ಏರಿಕೆ ಮಾಡಿ ವಿದ್ಯುತ್ ಸರಬರಾಜು ಕಂಪನಿಗಳು ಫುಲ್ ಸೈಲೆಂಟ್ ಆಗಿವೆ ‌.ಈ ಬಗ್ಗೆ ಏನು ಸರ್ ವರ್ಷಕ್ಕೆ ಮೂರು ಮೂರು ಬಾರಿ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತೀರಾ ಅಂತ ಬೆಸ್ಕಾಂ ಎಂ.ಡಿ ಅವರನ್ನ ಕೇಳಿದ್ರೆ ಮಿನಿಸ್ಟರ್ ನ್ನ ಕೇಳಿ ,ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಕೇಳಿ ಅಂತ ಸಾಬೂನು ಹೇಳ್ತಿದ್ದಾರೆ‌.

ಈ ಆರ್ಥಿಕ ವರ್ಷದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗುವ ಜತೆಗೆ ಕಲ್ಲಿದ್ದಲು ದರವೂ ಏರಿಕೆಯಾಗಿದೆ. ಹೀಗಾಗಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಳ ಕಲ್ಲಿದ್ದಲು ಅಭಾವದಿಂದ ವಿದ್ಯುತ್ ಕಂಪನಿಗಳು ನಷ್ಟದಲ್ಲಿ ಇವೆ. ಹೀಗಾಗಿ ಆರ್ಥಿಕವಾಗಿ ನಷ್ಟದಲ್ಲಿರುವ ಎಸ್ಕಾಂಗಳು ತಾತ್ಕಾಲಿಕ ಮಟ್ಟಕ್ಕೆ ದರ ಹೆಚ್ಚು ಮಾಡಲಾಗಿದೆ ಅಂತ ಸಮರ್ಥನೆ ಮಾಡಿಕೊಳ್ಳುತ್ತಿದೆ. ಆದ್ರೆ, ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗ್ತಿದ್ದ ಸರ್ಕಾರ ಇದೀಗ ಮತ್ತೆ ಜುಲೈ ಹಾಗೂ ಅಕ್ಟೋಬರ್ 1 ರಿಂದಲೂ ದರ ಪರಿಷ್ಕರಣೆ ಮಾಡಿರೋದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments