ಚಾಮರಾಜನಗರ : PFI ಸಂಘಟನೆ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಸಚಿವ ಸೋಮಣ್ಣ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಷ್ಟ ಶಕ್ತಿಗಳು ಯಾವಾಗ್ಲೂ ದುಷ್ಟ ಶಕ್ತಿಗಳೇ. ಚಾಮುಂಡಿಯನ್ನೂ ಏಕೆ ಆರಾಧನೆ ಮಾಡ್ತೀವಿ ಅಂದ್ರೆ ದುಷ್ಟ ಶಕ್ತಿಗಳನ್ನ ಶಿಕ್ಷಿಸೋಕೆ, ಇದೀಗ ಅಂತಹ ದುಷ್ಟರನ್ನು ಶಿಕ್ಷಿಸಲಾಗಿದೆ. ನಾವೆಲ್ಲಾ ಭಾರತೀಯರು, ಬದುಕುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅದಲ್ಲದೇ, ಇನ್ನೊಬ್ಬರ ಹಕ್ಕನ್ನು ಕಸಿಯುವುದು ಸರಿಯಲ್ಲ. ಇನ್ನೊಬ್ಬರ ಜೀವದ ಜೊತೆ ಆಟವಾಡಲು ಯಾರಿಗೆ ಹಕ್ಕಿದೆ. PFI ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತ ಮಾಡ್ತೀನಿ ಎಂದು ಹೇಳಿದರು.



