Friday, August 29, 2025
HomeUncategorizedಮಳೆಯಿಂದ‌ ಬೆಳೆ ಹಾನಿ.. ಪರಿಹಾರಕ್ಕಾಗಿ ಆಗ್ರಹ

ಮಳೆಯಿಂದ‌ ಬೆಳೆ ಹಾನಿ.. ಪರಿಹಾರಕ್ಕಾಗಿ ಆಗ್ರಹ

ವಿಜಯಪುರ :  ಜಿಲ್ಲೆ ಶಾಶ್ವತ ಬರ ಪೀಡಿತ ಜಿಲ್ಲೆಗೆ ಎಂಬ ಹಣೆಪಟ್ಟಿ ಇದೆ. ಜಿಲ್ಲೆಯ ರೈತರು ಒಮ್ಮೆ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಈಡಾಗಿದ್ದರು. ಈಗ ಅನಾವೃಷ್ಟಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಈಗ ಕಳೆದ ಕೆಲ ದಿನಗಳಿಂದ ಸುತಿಯುತ್ತಿರುವ ಭಾರೀ ಮಳೆಯ ಪರಿಣಾಮ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.

ರೈತರು ಬೆಳೆದ ತೊಗರಿ, ಕಬ್ಬು, ಗೋವಿನ ಜೋಳ, ಸಜ್ಜಿ ಸೇರಿ ರೈತರ ಬೆಳೆಗಳು ಹಾನಿಗೀಡಾಗಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗ ನಾವು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ, ಕಳೆದ ವರ್ಷವೂ ಇದೇ ರೀತಿ ಬೆಳೆಹಾನಿಯಾದ ವೇಳೆ ಸಮೀಕ್ಷೆ ಮಾಡಿಕೊಂಡು‌ ಹೋಗಿದ್ದರು. ಆದರೆ, ಪರಿಹಾರ ಮಾತ್ರ ಬಂದಿಲ್ಲ ಎಂದು ರೈತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಲವು ಅವಾಂತರವೇ ಸೃಷ್ಟಿಯಾಗಿದೆ. ಇದರ ಮಧ್ಯೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ರೈತರ ಜಮೀನಿನಲ್ಲಿ ‌ನೀರು ನುಗ್ಗಿ ಬೆಳೆ‌ ಹಾನಿಯಾಗಿದೆ, ಈಗಲಾದರೂ ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಲಕ್ಷ್ಯ ವಹಿಸಿ ನೊಂದ ರೈತರಿಗೆ ನೆರವಾಗಬೇಕಿದೆ.

ಸುನೀಲ್ ಭಾಸ್ಕರ್​, ಪವರ್​ ಟಿವಿ, ವಿಜಯಪುರ

RELATED ARTICLES
- Advertisment -
Google search engine

Most Popular

Recent Comments