Saturday, August 23, 2025
Google search engine
HomeUncategorizedಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರಿಗೆ ಅವಕಾಶ

ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರಿಗೆ ಅವಕಾಶ

ಬೆಂಗಳೂರು: ದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು  ಇಂದಿನಿಂದ ಭಕ್ತರಿಗೆ ಅವಕಾಶ ನೀಡಲಾಗಿದೆ.

ಬುಧವಾರ ಮಲಯಾಳಂನ ಶುಭ ತಿಂಗಳ ಚಿಂಗಂನಲ್ಲಿ ಐದು ದಿನಗಳ ಮಾಸಿಕ ಪೂಜೆ ಮತ್ತು ಆಚರಣೆಗಳಿಗಾಗಿ ಈ ದೇವಾಲಯದ ಬಾಗಿಲು ತೆರೆದು ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಸಮಯದಲ್ಲಿ ಭಕ್ತ ಸಾಗರವೇ ಇಲ್ಲಿ ಸೇರುತ್ತದೆ.

ನಂತರ, ಉಪದೇವತೆಗಳ ಮಹಾದ್ವಾರಗಳನ್ನು ತೆರೆಯಲಾಯಿತು ಮತ್ತು ಅರ್ಚಕರಿಂದ ದೀಪಗಳನ್ನು ಬೆಳಗಿಸಲಾಯಿತು. ಧಾರ್ಮಿಕ ವಿಧಿ ವಿಧಾನಗಳ ನಂತರ, ಭಕ್ತರು ಪವಿತ್ರ ಬೆಟ್ಟದ ಮೂಲಕ ಬಂದು ಅಯ್ಯಪ್ಪ ಮಂದಿರವನ್ನು ಸೇರುತ್ತಾರೆ. ಅಲ್ಲಿನ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಲು ಮತ್ತು ಮುಖ್ಯ ದೇವತೆಯಾದ ಅಯ್ಯಪ್ಪನ ಮುಂದೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಯಿತು. ದೇಗುಲವು ಆಗಸ್ಟ್ 21ರವರೆಗೆ ತೆರೆದಿರುತ್ತದೆ.

RELATED ARTICLES
- Advertisment -
Google search engine

Most Popular

Recent Comments