Site icon PowerTV

ಅಜಾತಶತ್ರು ವಾಜಪೇಯಿ 4ನೇ ಪುಣ್ಯತಿಥಿ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಗಲಿ ಇಂದಿಗೆ 4 ವರ್ಷ. ಬಿಜೆಪಿಗೆ ಹೊಸ ರೂಪ ಕೊಟ್ಟ ವಾಜಪೇಯಿಗೆ ಗೌರವಾರ್ಥವಾಗಿ ಮಂಗಳವಾರ ಬಿಜೆಪಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ವಿಜಯಘಾಟ್‌ನಲ್ಲಿ ವಾಜಪೇಯಿ ಸಮಾಧಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪುಷ್ಪ ನಮನ ಸಲ್ಲಿಸಿದರು.ಅಜಾತಶತ್ರುವಾಗಿದ್ದ ವಾಜಪೇಯಿ 2018ರ ಆಗಸ್ಟ್ 16ರಂದು ಅಸ್ತಂಗತರಾಗಿದ್ದರು.

Exit mobile version