Sunday, September 14, 2025
HomeUncategorizedವಿಶ್ವವೇ ಸಾವರ್ಕರ್ ಮೆಚ್ಚುಗೆ, SDPI ಕಾರ್ಯಕರ್ತನ ಮೇಲೆ ಕ್ರಮಕ್ಕೆ ಬಿಎಸ್​ವೈ ಆಗ್ರಹ.!

ವಿಶ್ವವೇ ಸಾವರ್ಕರ್ ಮೆಚ್ಚುಗೆ, SDPI ಕಾರ್ಯಕರ್ತನ ಮೇಲೆ ಕ್ರಮಕ್ಕೆ ಬಿಎಸ್​ವೈ ಆಗ್ರಹ.!

ಶಿವಮೊಗ್ಗ: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರ ಎಸ್​ಡಿಪಿಐ ಕಾರ್ಯಕರ್ತ ತೆಗೆಸಿದ ಹಿನ್ನಲೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಸಿದ್ದಾರೆ.

ಇಡೀ ವಿಶ್ವವೇ ವೀರ ಸಾವರ್ಕರ್ ಅವರನ್ನ ಕೊಂಡಾಡುತ್ತಿದೆ. ಭಾವಚಿತ್ರದ ತೆಗೆಸಿದ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಸಾವರ್ಕರ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಹೀಗಾಗಿ ಕಾಂಗ್ರೆಸ್‌ ನವರು ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ನಾವು ಪ್ರವಾಸ ಆರಂಭಿಸಿದಾಗ ಕಾಂಗ್ರೆಸ್‌ ಗೆ ಬಿಜೆಪಿ ಶಕ್ತಿ ಅರಿವಾಗುತ್ತದೆ. ನಾವೆಲ್ಲಾ ಒಟ್ಟಾಗಿ ಪ್ರವಾಸ ಮಾಡುವ ಮೂಲಕ ಪಕ್ಷದ ಸಂಘಟನೆ ಮಾಡಲಿದ್ದೇವೆ.

ರಾಜ್ಯದಲ್ಲಿ ಸಿಎಂ ಅಗುವ ಕನಸು ಕಾಣುವ ಕಾಂಗ್ರೆಸ್‌ ನವರ ಆಸೆ ಈಡೇರುವುದಿಲ್ಲ. ಸರ್ಕಾರದ ಸಾಧನೆಯನ್ನು ಜನೋತ್ಸವದ ಮೂಲಕ ಜನರಿಗೆ ತಿಳಿಸುತ್ತೇವೆ. ಈ ಬಾರಿ ವಿಧಾನಸಭೆಯಲ್ಲಿ ಗೆಲುವು ನಿಶ್ಚಿತ ಎಂದರು.

ಪ್ರಿಯಾಂಕ್ ಖರ್ಗೆ ಲಂಚ ಮಂಚದ ಹೇಳಿಕೆ ಬಗ್ಗೆ ಮಾತನಾಡಿದ ಬಿಎಸ್​ವೈ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅವರ ಹೇಳಿಕೆ ಅಕ್ಷಮ್ಯ. ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು.

RELATED ARTICLES
- Advertisment -
Google search engine

Most Popular

Recent Comments