Saturday, August 23, 2025
Google search engine
HomeUncategorizedಸಿದ್ದರಾಮಯ್ಯ ಗುಟ್ಟು ನನಗೂ ಗೊತ್ತು: ಸಚಿವ ಸುಧಾಕರ್

ಸಿದ್ದರಾಮಯ್ಯ ಗುಟ್ಟು ನನಗೂ ಗೊತ್ತು: ಸಚಿವ ಸುಧಾಕರ್

ಬೆಂಗಳೂರು: ಕೆ. ಸುಧಾಕರ್ ಸೈಲೆಂಟ್ ಅಗಿದ್ರೆ ಒಕೆ ಇಲ್ಲ ಬಿಚ್ಚಿಡುವೆ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಆರೋಗ್ಯ ಸಚಿವ ಕೆ. ಸುಧಾಕರ್ ಪ್ರತಿಕ್ರಿಯಸಿದ್ದಾರೆ.

ಸಿದ್ದರಾಮಯ್ಯ ಅವರು ಅದೇನು ಇದೆ ಎನ್ನುವುದು ಅವರು ಮೊದಲು ಬಿಚ್ಚಿಡಲಿ. ಅವರು ಬಿಚ್ಚಿಟ್ರೆ ನಾನು ಸಹ‌ ಬಿಚ್ಚಿಡುವೆ. ಅವರು ನನ್ನ ಹಳೆಯ ಗುರುಗಳು ಪ್ರೀತಿ ಜಾಸ್ತಿ ಆಗಿರಬೇಕು ಎಂದು ಸುಧಾಕರ್ ಹೇಳಿದ್ದಾರೆ.

ಮಾಜಿ ಸಿಎಂರ ಗೌಪ್ಯತೆ ವಿಚಾರ ನನಗೂ ಗೊತ್ತು. ಸಿದ್ದರಾಮಯ್ಯ ನಮ್ಮ‌ಹಳೇ ಗುರುಗಳು ಏನು ಹೇಳಿದ್ದಾರೆ. ನಾನು ಏನೋ ಹೇಳಿಲ್ಲ, ಸತ್ಯ ಹೇಳಿದ್ದೇನೆ. ಅವರು ಏನು ಬಿಚ್ಚಿಡ್ತಾರೋ, ಬಿಚ್ಚಿಡಲಿ.

ನನಗೆ ಕಾಂಗ್ರೆಸ್​ನಿಂದ ಮೊದಲು ಟಿಕೆಟ್ ಕೊಟ್ಟಿದ್ದು ಎಸ್.ಎಂ ಕೃಷ್ಣಾ, ಪರಮೇಶ್ವರ್ ಇವರಿಬ್ಬರೆ, ಅದು ಬಿಟ್ಟು ಯಾರು ನನಗೆ ಟಿಕೆಟ್ ಕೊಟ್ಟಿಲ್ಲ. ನನ್ನ ಸತ್ಯ ಅವರಿಗೆ ಗೊತ್ತು, ಅವರ ಸತ್ಯ ನನಗೆ ಗೊತ್ತು. ರಾಜಕೀಯ ಬೇರೆ ವೈಯಕ್ತಿಕ ಬೇರೆ ಎಂದು ಆರೋಗ್ಯ ಸಚಿವರು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments