Site icon PowerTV

ಕೋಮು ದ್ವೇಷದಿಂದ ಫಾಜಿಲ್ ಕೊಲೆ ಮಾಡಿದ್ದಾರೆ : ಮಹಮ್ಮದ್ ಕುಳಾಯಿ

ಮಂಗಳೂರು : ಕೋಮು ದ್ವೇಷದಿಂದ ಫಾಜಿಲ್ ಕೊಲೆ ಮಾಡಿದ್ದಾರೆ ಎಂದು ಮಂಗಳೂರಿನಲ್ಲಿ SDPI ಜಿಲ್ಲಾಧ್ಯಕ್ಷ ಮಹಮ್ಮದ್ ಕುಳಾಯಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃತ್ಯದ ಹಿಂದೆ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳು ಇದ್ದಾರೆ. ಫಾಜಿಲ್ ಅಮಾಯಕ, ಯಾವುದೇ ಸಂಘಟನೆಯಲ್ಲಿ ಗುರುತಿಸಿರಲಿಲ್ಲ. ರಾಜ್ಯ ಸರಕಾರದ ತಾರತಮ್ಯ ನೀತಿಯಿಂದಾಗಿ ಅನ್ಯಾಯವಾಗಿ ಕೊಲೆ ಮಾಡಿದ್ದಾರೆ ಎಂದರು.

ಇನ್ನು, ಮುಖ್ಯಮಂತ್ರಿ, ಗೃಹ ಮಂತ್ರಿ ಬಂದ ಸಂದರ್ಭದಲ್ಲಿಯೇ ಹತ್ಯೆ ನಡೆದಿರುವುದು ಖೇದಕರ ಎಂದು ಮಂಗಳೂರಿನಲ್ಲಿ SDPI ಜಿಲ್ಲಾಧ್ಯಕ್ಷ ಮಹಮ್ಮದ್ ಕುಳಾಯಿ ಹೇಳಿದ್ದಾರೆ.

Exit mobile version