Sunday, August 24, 2025
Google search engine
HomeUncategorizedಗೆದ್ದ ಸೊಕ್ಕಿನಲ್ಲಿ ಪೊಲೀಸರಿಗೆ ಆವಾಜ್ ಹಾಕಿದ ಕಾಂಗ್ರೆಸ್ ನಾಯಕ

ಗೆದ್ದ ಸೊಕ್ಕಿನಲ್ಲಿ ಪೊಲೀಸರಿಗೆ ಆವಾಜ್ ಹಾಕಿದ ಕಾಂಗ್ರೆಸ್ ನಾಯಕ

ಬೆಳಗಾವಿ : ಗೆದ್ದ ಸೊಕ್ಕಿನಲ್ಲಿ ಪೊಲೀಸರಿಗೆ ಕಾಂಗ್ರೆಸ್ ನಾಯಕ ‘ಏ ನಿನ್ನ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ’ ಎಂದು ಧಮ್ಕಿ ಹಾಕಿದ್ದಾರೆ.

ಕಾನೂನು ‌ಪಾಲಿಸಲು ಮುಂದಾದ ಎಸಿಪಿಗೆ ಆವಾಜ್ ಹಾಕಿದ ಕಾಂಗ್ರೆಸ್​ ನಾಯಕ ‘ಏ ನಿನ್ನ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ’ ಎಂದು ಧಮ್ಕಿ ಹಾಕಿದ್ದಾರೆ. ವಾಯವ್ಯ ಶಿಕ್ಷಕರ ಕ್ಷೇತ್ರದ ವಿಜೇತ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಆವಾಜ್ ಮಾಡಿದ್ದು, ಬೆಳಗಾವಿ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿಗೆ ಧಮ್ಕಿ ಹಾಕಿದ್ದಾರೆ.

ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದಿರುವ ಪ್ರಶಾಶ್ ಹುಕ್ಕೇರಿ. ಪ್ರಮಾಣ ಪತ್ರ ಸ್ವೀಕಾರ ಮಾಡಲು ನಾಯಕರ ಜತೆಗೆ ಆಗಮಿಸಿದ್ದಾರೆ. ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ‌ಎ.ಬಿ.ಪಾಟೀಲ್ ಜತೆ ಆಗಮಿಸಿದ್ದು, ಎಲ್ಲರನ್ನೂ ಒಳಗೆ ಬಿಡಲ್ಲ ಎಂದು ತಡೆದ ಪೊಲೀಸರಿಗೆ ಅವಾಜ್ ಹಾಕಿ ಮತ ಎಣಿಕೆ ಕೇಂದ್ರ ‌ಪ್ರವೇಶ ಮಾಡಿದ‌ ಕಾಂಗ್ರೆಸ್ ನಾಯಕರು. ಮೊದಲು ಲಕ್ಷ್ಮೀ ಹೆಬ್ಬಾಳ್ಕರ್ ಜತಗೆ ‌ಪೊಲೀಸರ ವಾಗ್ವಾದ ಆರಂಭಿಸಿದರು. ಬಳಿಕ ಮದ್ಯ ಪ್ರವೇಶ ಮಾಡಿದ ಪ್ರಕಾಶ ಹುಕ್ಕೇರಿ ಬಾಯಲ್ಲಿ ಇರೋ ಹಲ್ಲು ಮುರಿಯುತ್ತೇವೆ ಎಂದು ಅವಾಜ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments