Site icon PowerTV

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ

ಚಾಮರಾಜನಗರ : ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಸ್ನೇಹಿತನ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದಲ್ಲಿ‌ ನಡೆದಿದೆ.

ಸಂಜಯ್(27) ಮೃತ ದುರ್ದೈವಿ. ಈತ ಗುಂಡ್ಲುಪೇಟೆಯ ನಾಯಕರ ಬಡಾವಣೆ ನಿವಾಸಿಯಾಗಿದ್ದು, ಅದೇ ಬಡಾವಣೆಯ ಅಭಿ ಎಂಬುವವರು ಇಬ್ಬರು ಗೆಳೆಯರಾಗಿದ್ದು, ಕ್ಷುಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ . ಈ ವೇಳೆ ಕೋಪ ಜಾಸ್ತಿಯಾಗಿ, ಚಾಕು ಇರಿದು ಕೊಲೆಗೈದಿದ್ದಾನೆ.

ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Exit mobile version