Site icon PowerTV

ಬೇಲಿಯೇ ಎದ್ದು ಹೊಲ ಮೇಯೊಕೆ ಶುರು ಮಾಡಿದೆ : ಸಿದ್ದರಾಮಯ್ಯ

ಬೆಳಗಾವಿ: ಬೆಲೆನೆ ಎದ್ದು ಹೊಲ ಮೆಯೊಕೆ ಶುರು ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಐದು ಪೈಸೆ ಖರ್ಚು ಇಲ್ಲದೇ ನಾನು ಸಿಎಂ ಆಗಿದ್ದೇ‌ನೆ. ಶಾಸಕಾಂಗ ಸಭೆಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.

ಇನ್ನು, ಪ್ರಿಯಾಂಕ ಖರ್ಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಮಾಹಿತಿ ಕೊಟ್ಟವರಿಗೆ ತನಿಖೆ ಒಳಪಡಿಸೋದು ತಪ್ಪು. ಪಿಎಸ್​ಐ  ಅಕ್ರಮ ವಿಚಾರ ಹೈಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿ ತನಿಖೆ ಆಗಲಿ. ಸಿಐಡಿ ಮೇಲೆ ಪ್ರಭಾವ ಬೀರೋ ಸಾಧ್ಯತೆ ಇದೆ. ಸಚಿವ ಅಶ್ವತ್ಥ ನಾರಾಯಣ ‌ಸಂಬಂದಿಗೆ ನೋಟಿಸ್ ಕೊಟ್ಟಿದ್ದರು. ಬಳಿಕ ಅವರನ್ನು ತನಿಖೆ ಒಳಪಡಿಸಿಲ್ಲ. ಸಿಎಂ ಕುಮಾರಸ್ವಾಮಿ ಪ್ರಶ್ನೆಗೆ ನಾನು ಉತ್ತರ ಕೊಡಲ್ಲ. ಸುಳ್ಳು ಹೇಳುವರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.

Exit mobile version