Site icon PowerTV

ಬಿಜೆಪಿ ಕಾರ್ಯಕಾರಿಣಿ ಸಭೆ : 2023ರ ಎಲೆಕ್ಷನ್‌ಗೆ ಕೇಸರಿ ಪಡೆ ರಣತಂತ್ರ

ವಿಜಯನಗರ : ಇಂದು ವಿಜಯನಗರದ ಹೊಸಪೇಟೆಯಲ್ಲಿಂದು ಮಹತ್ವದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಕ್ಷಕ್ಕೆ ಇತ್ತೀಚಿನ ಬೆಳವಣಿಗೆಗಳಿಂದ ಆದ ಲಾಭ ನಷ್ಟದ ಬಗ್ಗೆ ಚರ್ಚೆ ನಡೆಯಲಿದೆ.

ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಎರಡು ದಿನಗಳಲ್ಲಿ ಹಲವು ಚಿಂತನಾ ಮಂಥನ, ತಂತ್ರಗಾರಿಕೆ
2023ರ ವಿಧಾನ ಸಭಾ ಚುನಾವಣೆಗೆ 150 ಮಿಷನ್ ಗುರಿ ಮಂತ್ರ ಪಠಣ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಂದ ಇಂದು‌ ಮಧ್ಯಾಹ್ನ ಉದ್ಘಾಟನೆ ನಡೆಯಲಿದೆ.

ಅರುಣ್ ಸಿಂಗ್, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಸಿ ಟಿ ರವಿ, ರಾಜ್ಯಾಧ್ಯಕ್ಷ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಹಾಗೂ ಶಾಸಕರು, ಸಚಿವರು ಹಲವರು ಭಾಗಿಯಾಗಲಿದ್ದಾರೆ.

ಈ ಸಭೆಯಲ್ಲಿ ಮುಂದಿನ ಚುನಾವಣೆಗಳಿಗೆ ಪಕ್ಷ ಸಂಘಟನೆಯ ತಂತ್ರಗಾರಿಕೆ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಹಾಗೂ ಮುಂದೆ ಬರ್ತಿರುವ 2023ರ ವಿಧಾನ ಸಭಾ ಚುನಾವಣೆಗೆ ಸಂಘಟನೆ ಚುರುಕುಗೊಳಿಸುವ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಅದುವಲ್ಲದೇ ಹಿರಿಯ ನಾಯಕರಿಂದ ಸಂಘಟನೆಯ ಬಗ್ಗೆ ಹಲವು‌ ಸಲಹೆ. ಪಕ್ಷ ಮತ್ತು ಸರ್ಕಾರದ ಬಗ್ಗೆ ಜನಾಭಿಪ್ರಾಯ ಏನಿದೆ ಎಂದು ಮಾಹಿತಿ ಸಂಗ್ರಹಿಸಲಿರುವ ನಾಯಕರು. ರಾಜ್ಯದಲ್ಲಿ ಇತ್ತಿಚೆಗೆ ನಡೆದ ಘಟನೆಗಳ ಬಗ್ಗೆ ಮತ್ತು 150 ಮಿಷನ್ ಟಾರ್ಗೆಟ್ ರೀಚ್ ಆಗುವ ಬಗ್ಗೆ ಮಾಹಿತಿ ನೀಡಲಿರುವ ಹಿರಿಯ ನಾಯಕರು.

Exit mobile version