Site icon PowerTV

ಈಶ್ವರಪ್ಪನವ್ರು ಕೊಲೆ ಮಾಡಿಸಿರೋದು : ಹರಿಪ್ರಸಾದ್

ಬೆಂಗಳೂರು ; ಶಿವಮೊಗ್ಗದಲ್ಲಿ ಮಾಜಿ ಭಜರಂಗದಳದ ಕಾರ್ಯಕರ್ತನ ಕೊಲೆಯಾಗಿರುವ ವಿಚಾರದಲ್ಲಿ ಸದನದಲ್ಲಿ ಬಿ ಕೆ ಹರಿಪ್ರಸಾದ್ ಹೇಳಿಕೆ‌ ನೀಡಿದ್ದಾರೆ.

ಎರಡು ವರ್ಷದ ಹಿಂದೆ ಭಜರಂಗದಳದಲ್ಲಿ ನ‌ನ್ನ ಮಗ ಇಲ್ಲ ಅಂತ ಪೊಲೀಸರಿಗೆ ಬರೆದ ಕೊಟ್ಟಿದ್ದಾರೆ ಇದಕ್ಕೆ ಈಶ್ವರಪ್ಪನವರು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಒಂದು ಸಮುದಾಯದ ಬಗ್ಗೆ ದೂರುವುದು ಸರಿಯಲ್ಲ ಎಂದರು . ಇದು ಈಶ್ವರಪ್ಪನವರು ಕೊಲೆ ಮಾಡಿಸಿರೋದು
ಈಶ್ವರಪ್ಪನವರು ಪರೋಕ್ಷವಾಗಿ ಕೊಲೆ ಮಾಡಿಸೋದು,  ಇನ್ನೂ ಈ ಕೊಲೆಯ ಬಗ್ಗೆ ತನಿಖೆಯಾಗಿಲ್ಲ ಆಗಲೇ ಈಶ್ವರಪ್ಪ ಈ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಈ ಬಗ್ಗೆ ಹೇಳಿಕೆ ನೀಡಬೇಕಿತ್ತು ಈಶ್ವರಪ್ಪ ರಾಜೀನಾಮೆ ಕೊಡ್ಲಿ ಮತ್ತು ಅವರನ್ನು ತಕ್ಷಣ ವಜಾಗೊಳಿಸಬೇಕು  ಎಂದು ಆಕ್ರೋಶಗೊಂಡ ಹರಿ ಪ್ರಸಾದ್ ಹೇಳಿಕೆ ನೀಡಿದ್ದಾರೆ.

Exit mobile version