Site icon PowerTV

ಧ್ವಜದ ಹೇಳಿಕೆ ಕೇವಲ ಈಶ್ವರಪ್ಪನವರದ್ದಲ್ಲ, ನಮೋ ಅಭಿಪ್ರಾಯವೂ ಅದೆ- ಸಿದ್ದು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಇಂದು ಟ್ವಿಟ್ ಒಂದರಲ್ಲಿ ಈಶ್ವರಪ್ಪನವರ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜದ ಹೇಳಿಕೆಗೆ ಸಂಬಂಧಿಸಿದಂತೆ ಗಂಭೀರ ಹೇಳಿಕೆಯೊಂದನ್ನು ದಾಖಲಿಸಿದ್ದಾರೆ.

ಈಶ್ವರಪ್ಪನವರು ನೀಡಿರುವ ಹೇಳಿಕೆ ಕೇವಲ ಅವರ ವೈಯುಕ್ತಿಕ ಹೇಳಿಕೆಯಲ್ಲ, ಅದು ಅಂತರಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು, ಆರ್​ಎಸ್​ಎಸ್​‘ ಸಂಚಾಲಕ ಮೋಹನ್ ಭಾಗವತ್​ವರೆಗೆ ಎಲ್ಲರ ಅಭಿಪ್ರಾಯವೂ ಆಗಿದೆ. ಆದರೆ ಅದನ್ನು ಬಹಿರಂಗವಾಗಿ ಅವರ ಪರವಾಗಿ ಹೇಳಿರುವ ಈಶ್ವರಪ್ಪ ದೇಶದ್ರೋಹಿ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

Exit mobile version