Wednesday, September 10, 2025
HomeUncategorizedಹಿಜಾಬ್​​ ವಿವಾದವನ್ನು ಕಾಂಗ್ರೆಸ್ ಲಾಭಕ್ಕೆ ಬಳಸಿಕೊಳ್ತಿಲ್ಲ : ಯು. ಟಿ. ಖಾದರ್

ಹಿಜಾಬ್​​ ವಿವಾದವನ್ನು ಕಾಂಗ್ರೆಸ್ ಲಾಭಕ್ಕೆ ಬಳಸಿಕೊಳ್ತಿಲ್ಲ : ಯು. ಟಿ. ಖಾದರ್

ಬೆಂಗಳೂರು : ಹಿಜಾಬ್​​ ವಿವಾದದ ವಿಚಾರವಾಗಿ ಕಾಂಗ್ರೇಸ್​​ ಪಕ್ಷದ ಮಾಜಿ ಸಚಿವ ಯು. ಟಿ. ಖಾದರ್ ಹೇಳಿಕೆ ನೀಡಿದ್ದಾರೆ.

ಇವಾಗ ಹೊಸ ಡ್ರೆಸ್ ಕೋಡ್ ತರುವುದಕ್ಕೆ ಸೂಕ್ತವಾದ ಸಮಯವಲ್ಲ. ಹಿಜಾಬ್​​ ವಿಚಾರಣೆಯು ಕೋರ್ಟ್​ನಲ್ಲಿದೆ ಹೀಗೆ ಏಕಾಏಕಿ ಪದ್ಧತಿಯಲ್ಲಿ ಬದಲಾವಣೆ ತರುವುದು ಸರಿಯಲ್ಲ. ಕೋರ್ಟ್ ತೀರ್ಪು ಬಂದ ಮೇಲೆ ನಿರ್ಧರಿಸಿ ಸಮವಸ್ತ್ರ ತರುವುದು ಸೂಕ್ತ ಎಂದು ಖಾದರ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು, ಹಿಜಾಬ್​​ ವಿವಾದವನ್ನು ಕೆಲವರು ಕಾಂಗ್ರೆಸ್ ಪಕ್ಷದ ಅಭಿವೃದ್ದಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷವು ಇದನ್ನ ಲಾಭಕ್ಕೆ ಬಳಸಿಕೊಳ್ಳುತ್ತಿಲ್ಲ, ಆ ರೀತಿ ಹೇಳುವುದು ತಪ್ಪು ವಿಚಾರವಾಗಿದೆ. ಮತ್ತು ಉಡುಪಿ ವಿಚಾರ ಬೇರೆ, ಕುಂದಾಪುರದ್ದು ಬೇರೆ. ಮೊದಲಿನಿಂದ ಶಿರಸ್ತ್ರಾಣ ಹಾಕುತ್ತಿದ್ದಾರೆ, ಅದನ್ನ ಏಕಾಏಕಿ ಬದಲಾಯಿಸೋದು ಏಕೆ ? ಶಿರವಸ್ತ್ರ ಹಾಕಿ ಬಂದವರನ್ನ ಕಾಲೇಜಿನ ಗೇಟ್​​ ಬಳಿ ನಿಲ್ಲಿಸೋದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದ್ದಾರೆ.

ಹಿಂದಿನ ಪದ್ಧತಿ ಇದ್ದರೆ ಮುಂದುವರೆಸಲಿ, ಹೊಸದಾಗಿ ಅವರು ಸಮವಸ್ತ್ರ ಕೊಡುವುದು ಬೇಡ ಶಾಲೆ ಮುಂದೆ ವಿದ್ಯಾರ್ಥಿ ಸೇರಲು ಅವಕಾಶ ಕೊಡಬಾರದು ಎಂದು ಯು. ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments