Thursday, September 4, 2025
HomeUncategorizedವೋಟ್​ಗಾಗಿ ಬಿಜೆಪಿ​​ ರಾಜಕೀಯ : ಸಿದ್ದರಾಮಯ್ಯ

ವೋಟ್​ಗಾಗಿ ಬಿಜೆಪಿ​​ ರಾಜಕೀಯ : ಸಿದ್ದರಾಮಯ್ಯ

ಬೆಂಗಳೂರು : ವೋಟ್​​ಗಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಹಿಜಾಬ್ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ. ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಿಜಾಬ್, ಕೇಸರಿ ಸಂಘರ್ಷ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸದ್ಯ ಈ ವಿಷಯ ಕೋರ್ಟ್​ನಲ್ಲಿದೆ. ನಾಳೆ ಏನು ಇತ್ಯರ್ಥ ಆಗುತ್ತೋ ನೋಡೋಣ. ಆದರೆ ಬಿಜೆಪಿ ನಾಯಕರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಕಳುಹಿಸೋದು ರಾಜಕೀಯ ಎಂದು ವಾಗ್ದಾಳಿ ನಡೆಸಿದರು.

ಹಿಜಾಬ್ ಬಹಳ ವರ್ಷಗಳಿಂದ ಧರಿಸುತ್ತಿದ್ದಾರೆ. ಹಿಜಾಬ್ ಮುಸ್ಲಿಂ ಸಮುದಾಯದ ಒಂದು ಭಾಗ. ಹಿಜಾಬ್ ಹಾಕಿದರೆ ಏನು ತೊಂದರೆ. ಏನು ತೊಂದರೆ ಆಗುತ್ತದೆ ಅಂತ ಹೇಳಬೇಕು ಅಲ್ವಾ?. ಮಕ್ಕಳ ಮೇಲೆ ಏನಾದ್ರೂ ದುಷ್ಪರಿಣಾಮ ಬೀಳುತ್ತಾ ಎಂದು ಪ್ರಶ್ನಿಸಿದ್ದಾರೆ.

 

RELATED ARTICLES
- Advertisment -
Google search engine

Most Popular

Recent Comments