Site icon PowerTV

ರಾಜ್ಯಕ್ಕೆ ಕೊರೋನಾ ಕಂಟಕ

ರಾಜ್ಯ : ರಾಜ್ಯದಲ್ಲಿ ಕೊವಿಡ್ ಮೂರನೇ ಅಲೆ‌ ತೀವ್ರಗೊಂಡಿದೆ. ದಿನ ದಿನಕ್ಕೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ನಿನ್ನೆ ಕೊರೋನಾ ಸೋಂಕಿನ ಸುನಾಮಿ ಬೀಸಿದೆ.

ಕರುನಾಡಿನಲ್ಲಿ ನಿನ್ನೆ ಒಂದೇ ದಿನ 30 ಸಾವಿರ ಸನಿಹಕ್ಕೆ ಬಂದಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ ಸಹ ನಿಧಾನವಾಗಿ ಏರಿಕೆ ಕಾಣುತ್ತಿದೆ. ನಿನ್ನೆ ರಾಜ್ಯದಲ್ಲಿ 14 ಮಂದಿಯನ್ನು ಕೊರೋನಾ ಬಲಿ ಪಡೆದುಕೊಂಡಿದೆ. ನಿಧಾನವಾಗಿ ಸಾವಿನತ್ತ ಮುಖ ಮಾಡಿರುವ ಕೊರೋನಾ ಮೂರನೇ ಅಲೆಯೂ ಕರುನಾಡಲ್ಲಿ ಮತ್ತಷ್ಟು ಭೀತಿ ಹೆಚ್ಚಿಸಿದೆ.

Exit mobile version