Site icon PowerTV

ವೀಕೆಂಡ್ ಲಾಕ್​ಡೌನ್​ನಲ್ಲಿ ಜಾತ್ರೆ ನಡೆಸಿದ ಅರಳಸುರಳಿ ಊರಜನರು

ಶಿವಮೊಗ್ಗ:ರಾಜ್ಯದಲ್ಲಿ ವೀಕೆಂಡ್ ಲಾಕ್ ಡೌನ್ ಇದ್ದರೂ ಶಿವಮೊಗ್ಗದಲ್ಲಿ ನಡೆಯುತ್ತಿದೆ ಜಾತ್ರಾ ಮಹೋತ್ಸವ. ಹೌದು, ಸ್ವತಃ ಗೃಹಮಂತ್ರಿ ತವರು ಕ್ಷೇತ್ರದಲ್ಲೇ, ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿದೆ. ಗೃಹಮಂತ್ರಿಯ ಊರಜನರು ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ. ವೀಕೆಂಡ್ ಲಾಕ್ ಡೌನ್ ಇದ್ದರೂ ಜಾತ್ರೆ ನಡೆಸುತ್ತಿದ್ದಾರೆ ಇಲ್ಲಿನ ಜನರು. ಈ ಊರಿನ ಹೆಸರು ಅರಳಸುರಳಿ. ಇಲ್ಲಿ ಸುಬ್ರಮಣ್ಯ ಷಷ್ಟಿ ಪ್ರಯುಕ್ತ ಜಾತ್ರಾ ಮಹೋತ್ಸವ ನಡೆಯುತ್ತಿದೆ.
ಈ ಅರಳಸುರಳಿಯಿರುವುದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ. ಜಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಜಮಾವಣೆಯಾಗಿದ್ದಾರೆ. ಸಾಮಾಜಿಕ ಅಂತರ ಮರೆತು ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಆದರೆ ಸ್ಥಳದಲ್ಲಿ ಗ್ರಾ.ಪಂ‌.ಯ ಯಾವುದೇ ಅಧಿಕಾರಿಗಳು ಇಲ್ಲ. ಇಲ್ಲಿನ ಜನರು ಸರ್ಕಾರದ ಆದೇಶಕ್ಕೆ ಕ್ಯಾರೆ ಎಂದಿಲ್ಲ. ಇದು ಕೋವಿಡ್ ನಿಯಮ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಇಲ್ಲಿನ ಗ್ರಾ.ಪಂ.ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ.

Exit mobile version