Site icon PowerTV

ಒಂಟಿ ಸಲಗ ಕಾಡಾನೆ ದಾಳಿಗೆ ರೈತ ಸಾವು

ತಮಿಳುನಾಡು : ಒಂಟಿ ಸಲಗ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾದ ಘಟನೆ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ತಿನ್ನೂರೈ ಗ್ರಾಮದಲ್ಲಿ ನಡೆದಿದೆ.

35 ವರ್ಷ ಪ್ರಾಯದ ಯಲ್ಲಪ್ಪ ಆನೆ ದಾಳಿಗೊಳಗಾಗಿ ಮೃತಪಟ್ಟ ರೈತ. ದನ ಮೇಯಿಸಲು ಹೋಗಿದ್ದ ಯಲ್ಲಪ್ಪನ ಮೇಲೆ ಒಂಟಿ ಸಲಗ ದಾಳಿಮಾಡಿದೆ. ಕಳೆದೊಂದು ವಾರದಿಂದ ಡೆಂಕಣಿಕೋಟೆ ಸುತ್ತಮುತ್ತಲಿನ ಕಡೆ ಒಂಟಿ ಸಲಗ ಬೀಡುಬಿಟ್ಟಿದೆ. ಸಂಭವ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ರೈತನ ಕುಟುಂಬಕ್ಕೆ ಪರಿಹಾರವಾಗಿ 50 ಸಾವಿರ ರೂ ಘೋಷಣೆ ಮಾಡಲಾಗಿದೆ

Exit mobile version