Site icon PowerTV

ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು : ಸಂಸದ ಪ್ರತಾಪ್ ಸಿಂಹ

ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಹಾನಿ ವಿಚಾರವಾಗಿ ತಮ್ಮದೆ ಸರ್ಕಾರಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಟ್ವಿಟ್​ರ ಮೂಲಕ ಮನವಿ ಮಾಡಿದ್ದಾರೆ.

ವ್ಯಕ್ತಿಗಳು ಪ್ರತಿಮೆಗಳಾಗುವುದು ಅವರ ನಿಷ್ಠೆ-ಪ್ರಾಮಾಣಿಕತೆ ಮತ್ತು ಬದ್ಧತೆಗಳಿಂದ. ವಿಚಿತ್ರ ಎಂದರೆ ಅವು ಯಾವೂ ಇಲ್ಲದೇ ಜನಗಳು ಅವರ ಸ್ವಾರ್ಥಕ್ಕಾಗಿ ಪ್ರತಿಮೆಗಳನ್ನು ವಿರೂಪ ಮಾಡ್ತಿದ್ದಾರೆ. ಹೇಳೋದು ಇಷ್ಟೇ, ಎಲ್ಲರೂ ಪ್ರತಿಮೆಗಳಾಗುವ ಎತ್ತರಕ್ಕೇರೋಣ ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆಗೆ ಕೃತ್ಯವೆಸಗಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಹಾನಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆಂದು ಎಂಇಎಸ್​ ಸಂಘಟನೆ ಬಗ್ಗೆ ಕಿಡಿಕಾರಿದ್ದಾರೆ.

Exit mobile version