Site icon PowerTV

ಬಯಲಾಯ್ತು ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಕಿತ್ತಾಟ

ಬೆಂಗಳೂರು : ಅಲ್ಪಸಂಖ್ಯಾತ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಅರಮನೆ ಮೈದಾನದ​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಗೈರಾದ ಮಾಜಿ ಸಚಿವ ಜಮೀರ್ ಅಹ್ಮದ್.

ಜಮೀರ್ ಅಹ್ಮದ್ ಅವರನ್ನು ಕಾರ್ಯಕ್ರಮಕ್ಕೆ ಕರೆಯದೇ ಕಡೆಗಣನೆ ಮಾಡಿದ್ದಕ್ಕೆ ,ಅಭಿಮಾನಿಗಳಿಂದ ಜಮೀರ್… ಜಮೀರ್… ಅಂತ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .ಅಲ್ಪಸಂಖ್ಯಾತ ಪದಗ್ರಹಣ ಕಾರ್ಯಕ್ರಮ ವಹಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಹ್ಯಾರಿಸ್​ರವರು ಧಿಕ್ಕಾರ ಕೂಗುತ್ತಿರುವ ಬೆಂಬಲಿಗರು ಶಾಂತ ರೀತಿಯಲ್ಲಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.ಹ್ಯಾರಿಸ್‌ ಮಾತಿಗೆ ಕಿವಿಗೊಡದ ಜಮೀರ್ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ.

ಸಚಿವ ಜಮೀರ್ ಅಹ್ಮದ್ ಅವರು ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದರು, ಮತ್ತು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು ಎಂದು ಜಮೀರ್ ಬೆಂಬಗಲಿಗರು ಗಲಾಟೆ ನಡೆಸಿದ್ದಾರೆ.

Exit mobile version