ಮಹಾದಾಯಿ ಗೋವಾದ ಜೀವ ನದಿ : ಪ್ರಮೋದ್ ಸಾವಂತ್

ಬೆಂಗಳೂರು: ಗೋವಾ ಸಿಎಂ ಪ್ರಮೋದ್ ಸಾವಂತ್ ಗೋವಾ ಅಧಿವೇಶನದಲ್ಲಿ ಮಹಾದಾಯಿ ವಿಷಯ ಪ್ರಸ್ತಾಪ. ಪಕ್ಷವನ್ನು ಬದಿಗಿಟ್ಟು ಮಹಾದಾಯಿ ನೋಡುವೆ ಎಂದು ತಮ್ಮ ಪಕ್ಷದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತಿದರು.

ಕೇಂದ್ರ, ಕರ್ನಾಟಕ, ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೆ ಮಹಾದಾಯಿ ವಿಚಾರದಲ್ಲಿ ಪಕ್ಷ ಮಾತು ಕೇಳುವುದಿಲ್ಲ. ಮಹಾದಾಯಿ ನನಗೆ ತಾಯಿ ಸಮಾನ, ಮಹಾದಾಯಿ ಗೋವಾದ ಜೀವ ನದಿಯಾಗಿದೆ. ಕರ್ನಾಟಕದಲ್ಲಿ ನಮ್ಮದೇ ಬಿಜೆಪಿ ಸರ್ಕಾರ ಆಡಳಿತ ಇದೆ. ಹಾಗಂತ ನಾನು ಪಕ್ಷದ ಮಾತು ಕೇಳಿ ರಾಜಿ ಆಗುವುದಿಲ್ಲ. ಮಹಾದಾಯಿ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣೆಯಲ್ಲ ಎಂದು ಅಧಿವೇಶನದಲ್ಲಿ ಪ್ರಸ್ತಾಪಿಸಿದರು.

 

RELATED ARTICLES

Related Articles

TRENDING ARTICLES