Site icon PowerTV

ಸಿಎಂ ಬಿಎಸ್ ಯಡಿಯೂರಪ್ಪಗೆ ತಲೆನೋವಾದ ಯತ್ನಾಳ್..!

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಶಾಸಕ ಬಸವರಾಜ್ ಯತ್ನಾಳ್ ಪಾಟೀಲ್ ತಲೆನೋವಾಗಿದ್ದಾರೆ.

ಬಸವರಾಜ್ ಯತ್ನಾಳ್ ಪಾಟೀಲ್ ಪದೇ ಪದೇ ಸಿಎಂ ಬದಲಾವಣೆ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಬಹಿರಂಗವಾಗಿ ಹೇಳಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದರೂ ಬಗ್ಗದ ಯತ್ನಾಳ.

ಶಾಸಕ ಬಸವರಾಜ ಪಾಟೀಲ್ ಯತ್ನಾಳ ಬಿಜೆಪಿ ತೋರೆದು ಜೆಡಿಎಸ್ ಸೇರಿಕೊಂಡಿದ್ದರು. ಆದರೆ ಜೆಡಿಎಸ್ ಸೋತ ಬಳಿಕ ಬಿಜೆಪಿ ಸೇರಿಕೊಂಡರು. ಜಗದೀಶ್ ಶೆಟ್ಟರ್, ಪ್ರಹಲ್ಲಾದ್ ಜೋಶಿ ಅವರು ಯತ್ನಾಳ್  ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದರು. ವಿರೋಧ ವ್ಯಕ್ತವಾದರೂ ಯತ್ನಾಳ್ ಗೆ ಸಿಎಂ ಯಡಿಯೂರಪ್ಪ ಮಣೆಹಾಕಿದರು. ಆದರೆ ಇವಾಗ ಯತ್ನಾಳ್ ಪಕ್ಷಕಕ್ಕೆ ಕರೆತಂದ ಬಿಎಸ್ ಯಡಿಯೂರಪ್ಪ ಅವರ ಮೇಲೆ ಸತತ ವಾಗ್ದಾಳಿ ನಡೆಸುತ್ತಿದ್ದಾರೆ.

Exit mobile version