Site icon PowerTV

ಅಕ್ರಮ ಸ್ಫೋಟಕ ದಾಸ್ತಾನು ಪ್ರಕರಣದ ಆರೋಪಿ ಅಪಘಾತದಿಂದ ಗಂಭೀರ..!

ದಕ್ಷಿಣ ಕನ್ನಡ : ಉಪ್ಪಿನಂಗಡಿಯ ಹಿರೇಬಂಡಾಡಿ ಸಮೀಪ ಮುರದಮೇಲು ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಜನಾರ್ದನ ಗೌಡ ಎಂಬವರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಕಡಬ ತಾಲೂಕಿನ ಪಾಲೋಲಿಯ ಜನಾರ್ದನ ಗೌಡ ರವರು ಈ ಹಿಂದೆ ಅಕ್ರಮ ಸ್ಫೋಟಕ ದಾಸ್ತಾನು ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ನಿನ್ನೆಯಷ್ಟೇ ಅಕ್ರಮ ಕೇಸ್ ನಲ್ಲಿ ಜಾಮೀನು ಪಡೆದು ಬಂದಿದ್ದರು. ಇಂದು ನಡೆದ ಅಪಘಾತದಲ್ಲಿ ಜನಾರ್ದನ ಗೌಡ ಗಂಭೀರ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು

Exit mobile version