Site icon PowerTV

ಕೊಪ್ಪಳದ ಕಾಂಗ್ರೆಸ್ ‘ಜನಧ್ವನಿ’ ಪ್ರತಿಭಟನೆ

ಕೊಪ್ಪಳ : ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಖಂಡಿಸಿ ಕೊಪ್ಪಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜನಧ್ವನಿ ಶಿರ್ಷಿಕೆಯಡಿ ಪ್ರತಿಭಟನೆ ಮಾಡಿದರು.

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜಂಯತಿ ಪ್ರಯುಕ್ತ ಜನಧ್ವನಿ ಎಂಬ ಶೀರ್ಷಿಕೆಯಡಿ ಪ್ರತಿಭಟನೆ ಮಾಡಿದರು. ಇನ್ನೂ ಇಬ್ಬರು ಮಹಾನ್ ವ್ಯಕ್ತಿಗಳ ಜಯಂತಿಯ ಸವಿ ನೆನಪಿಗಾಗಿ ವಿಧ್ಯಾರ್ಥಿಗಳಿಬ್ಬರಿಗೆ ಆನ್ಲೈನ್ ಶಿಕ್ಷಣಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶಕ್ಕೆ ಮೊಬೈಲ್ ವಿತರಣೆಯನ್ನು ಮಾಡಲಾಯಿತು. ಇದಕ್ಕೂ ಮುಂಚೆ ಜಿಲ್ಲಾ ಆಸ್ಪತ್ರೆಯಲ್ಲಿ ಸಸಿ ನೆಡುವ ಮುಖಾಂತರ ಜಯಂತಿಯ ದಿನದಂದು ಪರಿಸರ ಕಾಳಜಿ ಮೆರೆದರು. ತದನಂತರ ಮಾಜಿ ಸಚಿವ ಹಾಗು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಶಿವರಾಜ ತಂಗಡಗಿ ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಜ್ಯ ಬಿಜೆಪಿ ಸರ್ಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆಗಳನ್ನ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದಾರೆ. ಜಿಡಿಪಿ ಕುಸಿತ ಸೇರಿ ಹಲವು ವಲಯಗಳಲ್ಲಿ ಸರ್ಕಾರದ ಆಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

-ಶುಕ್ರಾಜ ಕುಮಾರ್

Exit mobile version