Wednesday, September 10, 2025
HomeUncategorizedನೀವೇನು ಭಾರತದಲ್ಲಿದ್ದಿರೋ..? ಪಾಕಿಸ್ತಾನದಲ್ಲಿದ್ದಿರೋ..? : ಈಶ್ವರಪ್ಪ

ನೀವೇನು ಭಾರತದಲ್ಲಿದ್ದಿರೋ..? ಪಾಕಿಸ್ತಾನದಲ್ಲಿದ್ದಿರೋ..? : ಈಶ್ವರಪ್ಪ

ಶಿವಮೊಗ್ಗ: ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಸಚಿವ ಕೆ.ಎಸ್. ಈಶ್ವರಪ್ಪ, ಇಂದು ಬೆವರಿಳಿಸಿದ ಘಟನೆ ನಡೆಯಿತು. ಇಂದು ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ನಿಮ್ಮ ಯೋಗ್ಯತೆಗೆ ಒಂದು ಕಟರ್ ತೆಗೆದುಕೊಳ್ಳಲು ಆಗೋದಿಲ್ವಾ ಅಂತಾ ಹರಿಹಾಯ್ದರು. ಜಿಲ್ಲೆಯಲ್ಲಿ ಗಾಳಿ, ಮಳೆಯಿಂದಾಗಿ ವಿದ್ಯುತ್ ಕಂಬಗಳು ಬಿದ್ದು ಅನೇಕ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಮಲೆನಾಡಿನಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಇದರಿಂದ ಕಂಬಗಳು ಕೂಡ ಹಾಳಾಗಿವೆ.

ಅಧಿಕ ಮರಗಳು ಬಿದ್ದಿವೆ. ಮಲೆನಾಡಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಮೀನಾಮೇಷ ಮಾಡುತ್ತಾ ಕುಳಿತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು. ಈ ವೇಳೆ ಆಕ್ರೋಶಗೊಂಡ ಅವರು, ನಿವೇನು ಭಾರತದಲ್ಲಿದ್ದೀರೋ ಅಥವಾ ಪಾಕಿಸ್ತಾನದಲ್ಲಿದ್ದಿರೋ ಎಂದು ಪ್ರಶ್ನೆ ಮಾಡಿದ್ರು. ಜಿಲ್ಲೆಯಲ್ಲಿ ಸಾವಿರಾರು ಕಂಬಗಳು ಬಿದ್ದಿವೆ, ಮರಗಳು ಧರೆಗುರುಳಿವೆ. ಅರಣ್ಯ ಇಲಾಖೆ ಇವುಗಳನ್ನು ತೆರವುಗೊಳಿಸಬೇಕು. ಪ್ರಸ್ತಾವನೆ ಕಳಿಸಲಾಗಿದೆ ಎಂದು ಹೇಳುತ್ತಾ ಕೂರುತ್ತೀರಾ ಹೀಗಾದರೆ ಮಲೆನಾಡಿನ ಜನ ಹೇಗೆ ಬದುಕಬೇಕು ಎಂದು ಪ್ರಶ್ನೆ ಮಾಡಿದ್ರು.

ಇದಕ್ಕೆ ಉತ್ತರ ನೀಡಿದ ಅರಣ್ಯ ಇಲಾಖೆ ಡಿಎಫ್‍ಓ ಶಂಕರ್, ಈಗಾಗಲೇ ಮರ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಂಡಿದ್ದೇವೆ. ಮರ ಕಡಿಯುವ ಕಟಿಂಗ್ ಯಂತ್ರ ಇಲ್ಲ ಎಂದು ಹೇಳಿದ್ರು. ಇದಕ್ಕೆ ಕೆರಳಿದ ಸಚಿವರು, ಅರಣ್ಯ ಇಲಾಖೆಯಲ್ಲಿ ಕಟಿಂಗ್ ಯಂತ್ರ ಇಲ್ಲ ಎಂದರೆ ಹೇಗೆ, ಏನು ಕೆಲಸಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ, ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅರಣ್ಯ ಇಲಾಖೆ ಮತ್ತು ಮೆಸ್ಕಾಂ ನಡುವೆ ಸಮನ್ವಯತೆ ಇಲ್ಲ. ಅವರ ಮೇಲೆ ಇವರು ಇವರ ಮೇಲೆ ಅವರು ದೂರುತ್ತಾ ಜನರನ್ನು ಕತ್ತಲಲ್ಲಿ ಇಟ್ಟಿದ್ದಾರೆ. ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ಅರಣ್ಯ ಇಲಾಖೆಗೆ ಕಣ್ಣೇ ಇಲ್ಲ. ಇವರ ವಿರುದ್ದವೇ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಮೆಸ್ಕಾಂ ಇಲಾಖೆ, ಅರಣ್ಯ ಇಲಾಖೆ ಸಭೆ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿ ಎರಡು ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಆ ಬಗ್ಗೆ ಮಾಹಿತಿ ನೀಡಬೇಕು. ಬಿದ್ದ ಮರಗಳ ತೆರವಿಗೆ ಅಗತ್ಯ ಉಪಕರಣಗಳನ್ನು ಖರೀದಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments