Sunday, August 24, 2025
Google search engine
HomeUncategorizedಹೊಸಕೋಟೆಯಲ್ಲಿ ನಿಧಿ ಶೋಧಕ್ಕೆ ಯತ್ನ : ಯುವಕ ಸಾವು

ಹೊಸಕೋಟೆಯಲ್ಲಿ ನಿಧಿ ಶೋಧಕ್ಕೆ ಯತ್ನ : ಯುವಕ ಸಾವು

ಹೊಸಕೋಟೆ : ನಿಧಿ ಕದಿಯಲು ಹೋದ ಚೋರರಲ್ಲಿ ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಕಾಲು ಮುರಿತವಾಗಿರುವ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಹಿಂಡಿಗಾನಹಳ್ಳಿ ಗ್ರಾಮದ ಸುರೇಶ್ (23) ಮೃತನು. ತಾಲೂಕಿನ ಕೆಂಬಡಿಗಾನಹಳ್ಳಿ ಗ್ರಾಮದ ಶ್ರೀನಿವಾಸ (22) ಮತ್ತು ಮಂಜುನಾಥ್ (23) ಹಾಗೂ ಯಲಹಂಕದ ಸಬಾಸಿನ್ (22) ಗಾಯಾಳುಗಳು.

ಒಟ್ಟು 8 ಜನರ ತಂಡ ಹಿಂಡಿಗನಾಳ ಗ್ರಾಮದ ಹೆದ್ದಾರಿ ರಸ್ತೆಯ ಬಳಿ ಇರುವ ಸುಮಾರು 1000 ವರ್ಷಗಳ ಪುರಾತನ ಆಂಜನೇಯ ಸ್ವಾಮಿ ದೇವಾಲಯದಲ್ಲಿ 9 ಜನರ ದುಷ್ಕರ್ಮಿಗಳ ತಂಡ ದೇವಾಲಯದಲ್ಲಿ ನಿಧಿ ತೆಗೆಯಲು ಮುಂದಾಗಿದ್ದಾರೆ. ನಿಧಿ ತೆಗೆಯಲು ದುಷ್ಕರ್ಮಿಗಳು ಮುಂದಾದಾಗ ದೇವಾಲಯ ಪುರಾತನವಾದ್ದರಿಂದ ಮಂಟಪ ಕುಸಿದ ಕಾರಣ ಮಂಟಪದ ಅಡಿಯಲ್ಲಿ ಸಿಲುಕಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಉಳಿದಂತೆ ಮಂಟಪದ ಅಡಿಯಲ್ಲಿ ಮೂವರು ಸಿಲುಕಿಕೊಂಡು ಗಾಯಳುಗಳಾಗಿದ್ದಾರೆ. ಉಳಿದಂತೆ ಜೊತೆಯಲ್ಲಿದ್ದವರು ಪರಾರಿಯಾಗಿದ್ದಾರೆ.

ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಈ ದುಷ್ಕರ್ಮಿಗಳು ದೇವಾಲಯದಲ್ಲಿ ನಿಧಿ ತೆಗೆಯಲು ಮುಂದಾದವೇಳೆ ಈ ಘಟನೆ ನಡೆದಿದೆ. ಈ ಸಮಯದಲ್ಲಿ ಮಂಟಪದ ಅಡಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಸಲುವಾಗಿ ಜೊತೆಯಲ್ಲಿಯೇ ಬಂದಿದ್ದಂತಹ ಇತರೆ ಸಹಚರರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ತಿಳಿಸಿದ್ದಾರೆ ಈ ವೇಳೆ ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್ ಚಾಲಕರು ಭಯಭೀತರಾಗಿ ಸ್ಥಳೀಯ ನಂದಗುಡಿ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಂಟಪದ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಉಳಿದವರು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಿದ್ದಾರೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಮಾಂಜಿ. ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments